‘ಮೇ 25ರಿಂದಲೇ ಆರಂಭವಾದ ಮಳೆ 2ನೇ ಹಂತದ ಚೆಂಡು ಹೂವಿನ ಬೆಳೆಗೆ ಹಾನಿ ಉಂಟುಮಾಡಿ ನಷ್ಟ ಅನುಭವಿಸಬೇಕಾಯಿತು. ಮೆಣಸಿನ ಕಾಯಿ ಬೆಳೆ ಮುಕ್ತಾಯ ಹಂತಕ್ಕೆ ಬಂದಿದ್ದು, ಈ ವರ್ಷ ಉತ್ತಮ ದರ ದೊರೆಯದೇ ನಿರಾಶೆಯಾಯಿತು. ಭತ್ತದ ವ್ಯವಸಾಯಕ್ಕಾದರೂ ಅನುಕೂಲವಾಗುವುದೆಂಬ ಭರವಸೆ ಯಿಂದ ಗದ್ದೆಯ ಕೆಲಸದತ್ತ ಗಮನ ಹರಿಸಬೇಕಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದೊಡ್ಡಬಿಳಾಹ ಗ್ರಾಮದ ರೈತ ಬಿ.ಎಂ.ಪ್ರಕಾಶ್.