'ಕನಸು' ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಮತ್ತು ಇತರ ಮೂವರು ಬುಧವಾರ ಡ್ರೋಣ್ ಕ್ಯಾಮೆರಾದೊಂದಿಗೆ ಎರ್ಮೈ ಫಾಲ್ಸ್ಗೆ ಬಂದಿದ್ದರು. ಈ ವೇಳೆ ಸಂತೋಷ್ ಕಾಲು ಜಾರಿ ನೀರಿಗೆ ಬಿದ್ದರು. ಜತೆಯಲ್ಲಿದ್ದ ಪ್ರೀತಂ ಅವರು ತಕ್ಷಣ ಅಗ್ಗಿಶಾಮಕ ಸಿಬ್ಬಂದಿಗೆ ಕರೆ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಸಂತೋಷ್ ಅವರ ಮೃತದೇಹವನ್ನು ಮೇಲೆತ್ತಿದ್ದಾರೆ.