ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಿತ್ತೂರು-ಬೈಲಹೊಂಗಲ ಮಾರ್ಗದಲ್ಲಿ
ಬರುವ ಚಿಕ್ಕನಂದಿಹಳ್ಳಿ ವ್ಯಾಪ್ತಿಯ ಹೊಸಕೇರಿ ಕೆರೆ ಹೂಳೆತ್ತುವ ಕಾಮಗಾರಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಚಾಲನೆ ನೀಡಿದ್ದರು. ಆಗ ಹೊಸದಾಗಿ ಪಕ್ಷ ಸೇರಿದ್ದ ಹನುಮಂತ ಕೊಟಬಾಗಿ, ಸ್ವಂತ ವೆಚ್ಚದಲ್ಲಿ 10 ಕೆರೆಗಳ ಹೂಳೆತ್ತಿಸುವುದಾಗಿ ಘೋಷಿಸಿದ್ದರು. ಆದರೆ, ಈ ಭರವಸೆ ಈಡೇರಿಲ್ಲ. ಇಂತಹ ನಾಯಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದರು.