ಯಲಚೇನಹಳ್ಳಿ ನಿವಾಸಿಯಾದ ಕುಮಾರ್, ಕೆಲಸ ನಿಮಿತ್ತ ಸಂಜೆ 4.30ರ ಸುಮಾರಿಗೆ ನಂಜಪ್ಪ ಬಡಾವಣೆಗೆ ಬಂದಿದ್ದ. ಈ ವೇಳೆ ಆತನನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು, ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳನ್ನು ಬೀಸಿದ್ದಾರೆ. ಜೀವಭಯದಿಂದ ತಪ್ಪಿಸಿಕೊಂಡ ಓಡಲಾರಂಭಿಸಿದ ಆತನನ್ನು ಬೆನ್ನಟ್ಟಿ ಹೋದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಟ್ಟಿದ್ದಾನೆ’ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ವಿವರಿಸಿದರು.