ಡೆಹರಾಡೂನ್: ಉತ್ತರಾಕಾಂಡದ ಕೆಲವೆಡೆ ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು, ಅಪಾಯದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ.
ಶಿವಪುರಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಹೆವೆಲ್ ನದಿಯ ನೀರಿಮಟ್ಟ ಹೆಚ್ಚಿದೆ. ನೀರಿನ ಹರಿವಿಗೆ ಒಂದು ಕಾರು, ಒಂದು ಬೈಕ್ ಕೊಚ್ಚಿ ಹೋಗಿವೆ. ಸಂಕಷ್ಟದಲ್ಲಿ ಸಿಲುಕಿದ್ದ ಇಬ್ಬರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ ಎಂದು ಶುಕ್ರವಾರ ಎಎನ್ಐ ಟ್ವೀಟ್ ಮಾಡಿದೆ.
ನದಿಯ ನೀರಿನಮಟ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿನ ಶಿಬಿರಗಳನ್ನು ಅಲ್ಲಿಂದ ತೆರವು ಮಾಡಲಾಗಿದೆ.
ಡೆಹರಾಡೂನ್ ತೆಹ್ರಿ, ಪುರಿ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಇಂದಿನಿಂದ(ಮೇ 15) 17ರ ವರೆಗೆ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
#Uttarakhand: Level of Heval river has risen, following heavy showers in Shivpuri, last night. 2 people, who were stranded, were rescued by Police. One motorcycle & one car were washed away in the river due to heavy flow of water. Camps near the river have been vacated. pic.twitter.com/hK8zoViPBv