ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ತಿಂಗಳು ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗುವುದು. ಸಾಮಾಜಿಕ ಕಾಳಜಿ, ಕಳಕಳಿವುಳ್ಳ ಪ್ರಾಮಾಣಿಕರನ್ನು ಪತ್ತೆಹಚ್ಚಲಾಗುವುದು. ಸಾಮಾಜಿಕ ಜಾಗೃತಿ, ಹೋರಾಟ ಹಾಗೂ ಸಮಾಜ ಸೇವೆಗಳಿಂದ, ಜನನಾಯಕರನ್ನಾಗಿ ಹೊರ ಹೊಮ್ಮುವಂತಹ ತರಬೇತಿ, ಮಾಹಿತಿಗಳನ್ನು ನೀಡಲಾಗುವುದು ಎಂದರು.