ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರೂರ ಗ್ರಾಮದಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಬಾಗಲಕೋಟೆ ಜಿಲ್ಲೆಯ ಹಳ್ಳೂರ ಗ್ರಾಮದಲ್ಲಿ ಪೂರೈಸಿ, ಕಾಲೇಜು ಶಿಕ್ಷಣಕ್ಕೆ ಬೆಂಗಳೂರು ಸೇರಿ ಅಲ್ಲಿಯೇ ವಿದ್ಯಾರ್ಥಿ ನಾಯಕರಾಗಿ, ಹಂತ ಹಂತವಾಗಿ ಬೆಳೆದಿದ್ದರು. ಆಗ ರಾಜಕೀಯದಲ್ಲಿ ಯುವನಾಯಕರಾಗಿದ್ದ ಡಾ.ಜೀವರಾಜ ಆಳ್ವಾ ಅವರೊಂದಿಗೆ ಗುರುತಿಸಿಕೊಂಡಿದ್ದ ಅವರು, ರಾಜಶೇಖರಮೂರ್ತಿ, ಎಂ.ವಿ. ದೇವರಾಜ ಅವರ ಒಡನಾಡಿಗಳಾಗಿದ್ದರು.