ಹತ್ಯೆಗೆ ಸಂಬಂಧಪಟ್ಟಂತೆ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಎನ್ನಲಾದ ರವಿ ಹುಲ್ಲನ್ನವರ, ಹನಮಂತ ಮಲ್ಲಾಡದ ಹಾಗೂ ಬೀರಪ್ಪ ದಳವಾಯಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಎನ್ನಲಾದ ಬಾಲಕಿಯ ತಂದೆ ಪರಸಪ್ಪ ಕರಡಿ ಸೇರಿದಂತೆ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಕುರುಬ ಸಮಾಜದ 17 ವರ್ಷದ ಬಾಲಕಿ ರಾಜೇಶ್ವರಿ (ಹೆಸರು ಬದಲಾಯಿಸಲಾಗಿದೆ) ಹಾಗೂ ವಾಲ್ಮೀಕಿ ಸಮಾಜದ ವಿಶ್ವನಾಥ ನೆಲಗಿ ಇಬ್ಬರೂ ಪ್ರೀತಿಸುತ್ತಿದ್ದರು.