ಮಾಲಗಿ ಗ್ರಾಮದ ಯಲ್ಲಪ್ಪ ಹಿರೇಹೊಳ್ಳಿ ಉತಾರ ಪಡೆಯಲು ಹೋಗಿದ್ದಾಗ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಸೇರಿ ₹8 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ’ಅಷ್ಟೊಂದು ಹಣ ನನ್ನ ಬಳಿ ಇಲ್ಲ. ನಾನು ಬಡವ ಇದ್ದೇನೆ‘ ಎಂದು ಯಲ್ಲಪ್ಪ ಹೇಳಿದಾಗ ಟಗರು ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಯಲ್ಲಪ್ಪ ಒಪ್ಪಿಲ್ಲ. ಕೊನೆಗೆ ₹6 ಸಾವಿರ ಕೊಟ್ಟು ಉತಾರ ಪಡೆಯಲು ಹೇಳಿದ್ದರು ಎನ್ನಲಾಗಿದೆ.