ಅಮೀನಗಡ: ಕ್ರೂಜರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಮೀನಗಡ ಸಮೀಪದ ರಾಯಚೂರು ಬಾಗಲಕೋಟೆ ಹೆದ್ದಾರಿಯಲ್ಲಿ ಸಂಭವಿಸಿದೆ. ಕುಷ್ಟಗಿ ತಾಲ್ಲೂಕಿನ ರಂಗಾಪೂರ ಗ್ರಾಮದ ಮಂಜುನಾಥ ಸಣ್ಣಪ್ಪ ಜಿಗಳೂರು (27) ಮೃತಪಟ್ಟವರು. ಹಿಂಬದಿ ಸವಾರ ನಾಗಪ್ಪ ಬಂಗರಪ್ಪ ಆಸಂಗಿ ಅವರಿಗೆ ಗಂಭೀರ ಗಾಯವಾಗಿದ್ದು ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಚಾಲಕ ಪರಾರಿಯಾಗಿದ್ದಾನೆ ಎಂದು ಪಿ.ಎಸ್.ಐ ಮಲ್ಲಿಕಾರ್ಜುನ ಕುಲಕರ್ಣಿ ತಿಳಿಸಿದರು.