ಬಿ.ಎ. ಬಿಎಡ್ ಓದಿರುವ ಮಹಾಂತೇಶ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಶಾಲೆಯ ಬಿಡುವಿನ ವೇಳೆಯಲ್ಲಿ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಹೊಲಕ್ಕೆ ಒಂದು ಮುಷ್ಠಿ ರಾಸಾಯನಿಕ ಗೊಬ್ಬರ ಹಾಕಿಲ್ಲ. ವರ್ಷದ ಹಿಂದೆ ಮಹಾರಾಷ್ಟ್ರದ ಜೈನ್ ಕಂಪನಿಯಿಂದ ಬಾಳೆ ಸಸಿ ತಂದು ಎರಡು ಎಕರೆಯಲ್ಲಿ 2.300 ಬಾಳೆ ಸಸಿ ನಾಟಿ ಮಾಡಿದ್ದಾರೆ. ಈ ವೇಲೆ 40 ಟನ್ ಕೊಟ್ಟಿಗೆ ಗೊಬ್ಬರ, 35 ದಿನಗಳ ನಂತರ 45 ಗ್ರಾಂ ಸಾರಜನಿಕ, ರಂಜಕ, 45 ಗ್ರಾಂ ಪೊಟ್ಯಾಷ್ ಗೊಬ್ಬರ ಹಾಕಲಾಗಿದೆ. ಹೀಗಾಗಿ ಒಂದು ಬಾಳೆ ಗಿಡದಲ್ಲಿ 35 ರಿಂದ 40 ಕೆ.ಜಿ ಬಾಳೆ ಹಣ್ಣು ಬೆಳೆದಿದೆ ಎನ್ನುತ್ತಾರೆ ಮಹಾಂತೇಶ.