ಪುನರ್ವಸತಿ ಕಾಮಗಾರಿ ಸ್ಥಗಿತಗೊಳಿಸಿದ ವಿಷಯ ತಿಳಿದು ಸ್ಥಳಕ್ಕೆ ಬಂದ ಕೃಷ್ಣಾ ಮೇಲ್ದಂಡೆ ಯೋಜನೆ ರಬಕವಿ ವಿಭಾಗದ ಎಇಇ ಆರ್.ಕೆ.ಕುಲಕರ್ಣಿ 2014ರಲ್ಲಿ ಸ್ಥಳೀಯ ಹಳಿಂಗಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಜಾಗವನ್ನು ತಮದಡ್ಡಿ ಪುನರ್ವಸತಿಗೆ ಬಳಸಲು ಠರಾವು ಮಾಡಲಾಗಿದೆ. 2016ರಲ್ಲಿ ಪುನರ್ವಸತಿಗೆ ಸರ್ಕಾರ ಈ ಜಾಗ ನಿಗದಿಗೊಳಿಸಿದೆ.
2019ರಲ್ಲಿ ಇಲ್ಲಿ ಲೇಔಟ್ ಮಾಡಿಕೊಡಲು ಕಂದಾಯ ಇಲಾಖೆ ಅನುಮೋದನೆ ಪಡೆದು ಈಗ ಕೆಲಸ ಆರಂಭವಾಗಿದೆ.
ಇಲ್ಲಿಯವರೆಗೆ ಇಲ್ಲದ ಹಲವು ಇಲಾಖೆಗಳು ಈಗ ದಿಢೀರನೆ ಬರುತ್ತಿರುವುದು ಅನುಮಾನಗಳನ್ನು ಹುಟ್ಟುಹಾಕುತ್ತಿವೆ ಎಂದರು.