ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ್ಮದಿನದ ಕಾರ್ಯಕ್ರಮದಲ್ಲಿ ಮುಧೋಳದ ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್ಐ ಸಂಗಮೇಶ ಹೊಸಮನಿ ಹಾಗೂ ಲೋಕಾಪುರ ಪಿಎಸ್ಐ ಶಿವಶಂಕರ್ ಮುಕರಿ ಸಮವಸ್ತ್ರದಲ್ಲೇ ಭಾಗವಹಿಸಿ ಶುಭ ಕೋರಿದ್ದರು. ಈ ಫೋಟೊಗಳನ್ನು ಅರುಣ ಕಾರಜೋಳ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.