<p><strong>ಬೇಲೂರು</strong> (ಬಾದಾಮಿ): ‘ಲಿಂ. ಬಸವಪ್ರಸಾದ ಶ್ರಿಗಳು ಬಸವ ತತ್ವದಂತೆ ಲಿಂಗಪೂಜಾ ನಿಷ್ಠರಾಗಿ ಕಾಯಕ, ದಾಸೋಹ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.</p>.<p>ಬೇಲೂರ ಗ್ರಾಮದಲ್ಲಿ ಬುಧವಾರ ಗುರುಬಸವೇಶ್ವರ ಮಠದ ಬಸವಪ್ರಸಾದ ಶ್ರೀಗಳ 10ನೇ ಪುಣ್ಯಸ್ಮರಣೋತ್ಸವ ಮತ್ತು ಮಹಾಂತ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಬಸವಾದಿ ಶರಣರ ಪರಂಪರೆ ಬಹು ಶ್ರೇಷ್ಠವಾದದ್ದು. ಮಠದ ನೂತನ ಪಟ್ಟಾಧಿಕಾರ ಹೊಂದಿದ ಮಹಾಂತ ಶ್ರೀಗಳು ಶರಣರ ವಚನ ಮೌಲ್ಯಗಳ ಪ್ರಚಾರ ಮಾಡಿ ಸಮಾಜ ಸೇವೆಯನ್ನು ಮಾಡಿ’ ಎಂದು ಶುಭ ಹಾರೈಸಿದರು.</p>.<p>‘ಉತ್ತಮ ಸಮಾಜವನ್ನು ನಿರ್ಮಿಸಲು ಮಠದ ಸ್ವಾಮೀಜಿಗಳ ತ್ಯಾಗ ದೊಡ್ಡದಿದೆ. ಪಟ್ಟಾಧಿಕಾರ ಹೊಂದಿದ ನೂತನ ಶ್ರೀಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಭಕ್ತರು ಮಠಗಳಿಗೆ ಶಕ್ತಿ ತುಂಬಬೇಕು’ ಎಂದು ಗದುಗಿನ ಸಿದ್ದರಾಮ ಶ್ರಿ ಹೇಳಿದರು.</p>.<p>‘ಬಸವಾದಿ ಶರಣರ ಪರಂಪರೆಯ ಬಗ್ಗೆ ಸಮಾಜದ ಜನರಲ್ಲಿ ಅರಿವು ಮೂಡಿಸಬೇಕು. ಮೂಢ ನಂಬಿಕೆಗಳನ್ನು ಹೋಗಲಾಡಿಸಿ ವೈಚಾರಿಕತೆ ಬೆಳೆಸಿ’ ಎಂದು ಇಳಕಲ್ ಗುರುಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.</p>.<p>ನೂತನ ಪೀಠಾಧಿಪತಿಯಾದ ಮಹಾಂತ ಶ್ರೀಗಳಿಗೆ ಗುರುಬಸವ ಸ್ವಾಮೀಜಿ ಷಟಸ್ಥಲ ಬ್ರಹ್ಮೋಪದೇಶ ಮತ್ತು ಚಿನ್ಮಯಾನುಗ್ರಹ ಪ್ರಸಾದಿ ಸ್ಥಲ ದೀಕ್ಷೆಯನ್ನು ನೀಡಿದರು.</p>.<p>ಗುರುಬಸವೇಶ್ವರ ಮಠದ ಮುಕ್ತಾಯಕ್ಕ ಅಮ್ಮನವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನೂತನ ಮಠಾಧೀಶರಾದ ಮಹಾಂತ ಶ್ರೀ ಮಾತನಾಡಿ, ‘ಭಕ್ತರ ಸಹಕಾರದಿಂದ ಸಮಾಜ ಸೇವೆಯಲ್ಲಿ ತೊಡಗುವೆ’ ಎಂದು ಹೇಳಿದರು.</p>.<p>ನಿಜಗುಣಪ್ರಭು ತೋಂಟದಾರ್ಯ ಸ್ವಾಮೀ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು.</p>.<p>ಶಿವಲಿಂಗೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಗಣ್ಯರಾದ ಎಂ.ಬಿ. ಹಂಗರಗಿ, ಬಿ.ಪಿ. ಹಳ್ಳೂರ, ಎಫ್.ಆರ್. ಪಾಟೀಲ, ಬೇಲೂರ ಗ್ರಾಮದ ಹಿರಿಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-19-1523753206</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು</strong> (ಬಾದಾಮಿ): ‘ಲಿಂ. ಬಸವಪ್ರಸಾದ ಶ್ರಿಗಳು ಬಸವ ತತ್ವದಂತೆ ಲಿಂಗಪೂಜಾ ನಿಷ್ಠರಾಗಿ ಕಾಯಕ, ದಾಸೋಹ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.</p>.<p>ಬೇಲೂರ ಗ್ರಾಮದಲ್ಲಿ ಬುಧವಾರ ಗುರುಬಸವೇಶ್ವರ ಮಠದ ಬಸವಪ್ರಸಾದ ಶ್ರೀಗಳ 10ನೇ ಪುಣ್ಯಸ್ಮರಣೋತ್ಸವ ಮತ್ತು ಮಹಾಂತ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಬಸವಾದಿ ಶರಣರ ಪರಂಪರೆ ಬಹು ಶ್ರೇಷ್ಠವಾದದ್ದು. ಮಠದ ನೂತನ ಪಟ್ಟಾಧಿಕಾರ ಹೊಂದಿದ ಮಹಾಂತ ಶ್ರೀಗಳು ಶರಣರ ವಚನ ಮೌಲ್ಯಗಳ ಪ್ರಚಾರ ಮಾಡಿ ಸಮಾಜ ಸೇವೆಯನ್ನು ಮಾಡಿ’ ಎಂದು ಶುಭ ಹಾರೈಸಿದರು.</p>.<p>‘ಉತ್ತಮ ಸಮಾಜವನ್ನು ನಿರ್ಮಿಸಲು ಮಠದ ಸ್ವಾಮೀಜಿಗಳ ತ್ಯಾಗ ದೊಡ್ಡದಿದೆ. ಪಟ್ಟಾಧಿಕಾರ ಹೊಂದಿದ ನೂತನ ಶ್ರೀಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಭಕ್ತರು ಮಠಗಳಿಗೆ ಶಕ್ತಿ ತುಂಬಬೇಕು’ ಎಂದು ಗದುಗಿನ ಸಿದ್ದರಾಮ ಶ್ರಿ ಹೇಳಿದರು.</p>.<p>‘ಬಸವಾದಿ ಶರಣರ ಪರಂಪರೆಯ ಬಗ್ಗೆ ಸಮಾಜದ ಜನರಲ್ಲಿ ಅರಿವು ಮೂಡಿಸಬೇಕು. ಮೂಢ ನಂಬಿಕೆಗಳನ್ನು ಹೋಗಲಾಡಿಸಿ ವೈಚಾರಿಕತೆ ಬೆಳೆಸಿ’ ಎಂದು ಇಳಕಲ್ ಗುರುಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.</p>.<p>ನೂತನ ಪೀಠಾಧಿಪತಿಯಾದ ಮಹಾಂತ ಶ್ರೀಗಳಿಗೆ ಗುರುಬಸವ ಸ್ವಾಮೀಜಿ ಷಟಸ್ಥಲ ಬ್ರಹ್ಮೋಪದೇಶ ಮತ್ತು ಚಿನ್ಮಯಾನುಗ್ರಹ ಪ್ರಸಾದಿ ಸ್ಥಲ ದೀಕ್ಷೆಯನ್ನು ನೀಡಿದರು.</p>.<p>ಗುರುಬಸವೇಶ್ವರ ಮಠದ ಮುಕ್ತಾಯಕ್ಕ ಅಮ್ಮನವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನೂತನ ಮಠಾಧೀಶರಾದ ಮಹಾಂತ ಶ್ರೀ ಮಾತನಾಡಿ, ‘ಭಕ್ತರ ಸಹಕಾರದಿಂದ ಸಮಾಜ ಸೇವೆಯಲ್ಲಿ ತೊಡಗುವೆ’ ಎಂದು ಹೇಳಿದರು.</p>.<p>ನಿಜಗುಣಪ್ರಭು ತೋಂಟದಾರ್ಯ ಸ್ವಾಮೀ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು.</p>.<p>ಶಿವಲಿಂಗೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಗಣ್ಯರಾದ ಎಂ.ಬಿ. ಹಂಗರಗಿ, ಬಿ.ಪಿ. ಹಳ್ಳೂರ, ಎಫ್.ಆರ್. ಪಾಟೀಲ, ಬೇಲೂರ ಗ್ರಾಮದ ಹಿರಿಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-19-1523753206</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>