<p><strong>ಬಾದಾಮಿ</strong>: ತಾಲ್ಲೂಕಿನ ಬಾಚಿನಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ದುರಸ್ತಿಗೆ ಸರ್ಕಾರದಿಂದ ಹಣ ಮಂಜೂರಾದರೂ ಎರಡು ವರ್ಷಗಳಿಂದ ದುರಸ್ತಿ ಭಾಗ್ಯ ಕಂಡಿಲ್ಲ.</p>.<p>ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ವರ್ಗದವರೆಗೆ ಪಾಠ ಬೋಧನೆ ನಡೆಯುತ್ತಿದೆ. 110 ಮಕ್ಕಳ ದಾಖಲಾತಿ ಇದೆ. ಮುಖ್ಯ ಶಿಕ್ಷಕರು ಸೇರಿದಂತೆ ಐವರು ಶಿಕ್ಷಕ ಸಿಬ್ಬಂದಿ ಇದ್ದಾರೆ. 8 ಕೊಠಡಿಗಳಲ್ಲಿ ಎರಡರಲ್ಲಿ ಮಾತ್ರ ಮಕ್ಕಳ ಪಾಠ ಬೋಧನೆಗೆ ಅವಕಾಶವಿದೆ ಎಂದು ಗ್ರಾಮಸ್ಥರು ಹೇಳಿದರು.</p>.<p>ಶತಮಾನದ ಶಾಲೆಯಾದ ಬಾಚಿನಗುಡ್ಡ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಸ್ವಾತಂತ್ರ್ಯ ಪೂರ್ವದ ಕಟ್ಟಡ ಐದು ಕೊಠಡಿಗಳ ಹೆಂಚು ಒಡೆದು ಮಳೆಗಾಲದಲ್ಲಿ ಸೋರುತ್ತಿರುವುದರಿಂದ ಬೀಗ ಹಾಕಿ ಎರಡು ವರ್ಷಗಳೇ ಗತಿಸಿವೆ. ಎರಡೇ ಕೊಠಡಿಯಲ್ಲಿ ಎಲ್ಲ ಮಕ್ಕಳು ಅಧ್ಯಯನ ಮಾಡುವಂತಾಗಿದೆ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದರು.</p>.<p>ಗ್ರಾಮದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಡಿ.ಎಂ. ಅನುದಾನ ₹ 14 ಲಕ್ಷ ಮತ್ತು ಶಾಲಾ ದುರಸ್ತಿಗೆ ಮುಖ್ಯಮಂತ್ರಿ ಅನುದಾನ ₹ 10 ಲಕ್ಷ ಮಂಜೂರಾಗಿದ್ದು 2025ರ ಆ. 8ರಂದು ಶಾಸಕರು ಭೂಮಿಪೂಜೆ ಮಾಡಿದ್ದಾರೆ.</p>.<p>‘ಶಾಸಕರು ಭೂಮಿ ಪೂಜೆ ಮಾಡಿದರು. ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದೆವು. ಹೊಸ ಕಟ್ಟಡ ಕಾಮಗಾರಿ ಆರಂಭವಾಗಿ ಸ್ಥಗಿತವಾಯಿತು. ಆದರೆ ಐದು ಕೊಠಡಿಗಳ ಶಾಲಾ ದುರಸ್ತಿ ಕಾಮಗಾರಿ ಆರಂಭವಾಗಲಿಲ್ಲ’ ಎಂದರು ಗ್ರಾಮಸ್ಥರು.</p>.<p>‘ದೀಡ ತಿಂಗಳ ಸಾಲಿ ಸೂಟಿ ಇತ್ತು. ಸೂಟ್ಯಾಗ ಸಾಲಿ ಕಟ್ಟಡ ನಿರ್ಮಾಣ ಮತ್ತ ಸಾಲಿ ಕಟ್ಟಡ ದುರಸ್ತಿ ಮಾಡಬೇಕಿತ್ತು. ಸಾಲಿ ಚಾಲೂ ಆದರೂ ಇನ್ನೂ ಹೊಸ ಕೋಲಿ ಕಟ್ಟಡ ಮುಗಿದಿಲ್ಲ ಮತ್ತು ದುರಸ್ತಿ ಕೆಲಸ ನಡೆದಿಲ್ಲ. ಮಕ್ಕಳಿಗೆ ಬಹಳಾ ತೊಂದರಿ ಆಗೈತಿ. ಕುಂದ್ರಾಕ ಜಾಗಾ ಇಲ್ಲ ಕಲ್ಯಾಣ ಮಂಟಪ ಗುಡಿ ಗುಂಡಾರದಾಗ ಸಾಲಿ ನೆಡಸಬೇಕಾಗೈತಿ’ ಎಂದು ಶಾಲಾ ಸುಧಾರಣಾ ಸಮಿತಿ ಸದಸ್ಯ ರುದ್ರಗೌಡ ರೋಣದ ಬೇಸರ ವ್ಯಕ್ತಪಡಿಸಿದರು.</p>.<p>‘ಮಕ್ಕಳಿಗೆ ಪಾಠ ಬೋಧನೆ ಮಾಡಲು ಕೊಠಡಿಗಳ ಕೊರತೆ ಇದೆ. ಎರಡು ಕೊಠಡಿಗಳು ಮಾತ್ರ ಇವೆ. ಒಂದು ಕೊಠಡಿ ದುರಸ್ತಿ ಮಾಡಿಸಿರುವೆ. ವರ್ಗವಾಗಿ ಈ ಶಾಲೆಗೆ ಹೊಸದಾಗಿ ಬಂದಿರುವೆ. ನೂತನ ಕಟ್ಟಡದ ಬಗ್ಗೆ ಮಾಹಿತಿ ಇಲ್ಲ. ಈಗ ಎರಡು ಕೊಠಡಿಯಲ್ಲಿ ತರಗತಿಗಳನ್ನು ನಡೆಸುತ್ತೇವೆ. ಶಾಲಾ ಸುಧಾರಣಾ ಸಮಿತಿ ಸದಸ್ಯರನ್ನು ಕೇಳಿ ಶಿಕ್ಷಣ ಇಲಾಖೆ ಅಧಿಕಾರಿಗಳ ತಿಳಿಸುವೆ’ ಎಂದು ಮುಖ್ಯ ಶಿಕ್ಷಕ ಹೇಳಿದರು.</p>.<p> 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 2 ಕೊಠಡಿ ಮಾತ್ರ ಲಭ್ಯ ಅರ್ಧಕ್ಕೆ ನಿಂತ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಆರಂಭವಾಗದ ಶಾಲಾ ಕೊಠಡಿ ದುರಸ್ತಿ ಕಾಮಗಾರಿ</p>.<div><blockquote>ನೂತನ ಶಾಲಾ ಕಟ್ಟಡವನ್ನು ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಕಟ್ಟಡ ಕಾಮಗಾರಿ ಬಗ್ಗೆ ಪರಿಶೀಲಿಸಲಾಗುವುದು </blockquote><span class="attribution">ಕೇಶವ ಪೆಟ್ಲೂರ ಬಿಇಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ತಾಲ್ಲೂಕಿನ ಬಾಚಿನಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ದುರಸ್ತಿಗೆ ಸರ್ಕಾರದಿಂದ ಹಣ ಮಂಜೂರಾದರೂ ಎರಡು ವರ್ಷಗಳಿಂದ ದುರಸ್ತಿ ಭಾಗ್ಯ ಕಂಡಿಲ್ಲ.</p>.<p>ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ವರ್ಗದವರೆಗೆ ಪಾಠ ಬೋಧನೆ ನಡೆಯುತ್ತಿದೆ. 110 ಮಕ್ಕಳ ದಾಖಲಾತಿ ಇದೆ. ಮುಖ್ಯ ಶಿಕ್ಷಕರು ಸೇರಿದಂತೆ ಐವರು ಶಿಕ್ಷಕ ಸಿಬ್ಬಂದಿ ಇದ್ದಾರೆ. 8 ಕೊಠಡಿಗಳಲ್ಲಿ ಎರಡರಲ್ಲಿ ಮಾತ್ರ ಮಕ್ಕಳ ಪಾಠ ಬೋಧನೆಗೆ ಅವಕಾಶವಿದೆ ಎಂದು ಗ್ರಾಮಸ್ಥರು ಹೇಳಿದರು.</p>.<p>ಶತಮಾನದ ಶಾಲೆಯಾದ ಬಾಚಿನಗುಡ್ಡ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಸ್ವಾತಂತ್ರ್ಯ ಪೂರ್ವದ ಕಟ್ಟಡ ಐದು ಕೊಠಡಿಗಳ ಹೆಂಚು ಒಡೆದು ಮಳೆಗಾಲದಲ್ಲಿ ಸೋರುತ್ತಿರುವುದರಿಂದ ಬೀಗ ಹಾಕಿ ಎರಡು ವರ್ಷಗಳೇ ಗತಿಸಿವೆ. ಎರಡೇ ಕೊಠಡಿಯಲ್ಲಿ ಎಲ್ಲ ಮಕ್ಕಳು ಅಧ್ಯಯನ ಮಾಡುವಂತಾಗಿದೆ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದರು.</p>.<p>ಗ್ರಾಮದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಡಿ.ಎಂ. ಅನುದಾನ ₹ 14 ಲಕ್ಷ ಮತ್ತು ಶಾಲಾ ದುರಸ್ತಿಗೆ ಮುಖ್ಯಮಂತ್ರಿ ಅನುದಾನ ₹ 10 ಲಕ್ಷ ಮಂಜೂರಾಗಿದ್ದು 2025ರ ಆ. 8ರಂದು ಶಾಸಕರು ಭೂಮಿಪೂಜೆ ಮಾಡಿದ್ದಾರೆ.</p>.<p>‘ಶಾಸಕರು ಭೂಮಿ ಪೂಜೆ ಮಾಡಿದರು. ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದೆವು. ಹೊಸ ಕಟ್ಟಡ ಕಾಮಗಾರಿ ಆರಂಭವಾಗಿ ಸ್ಥಗಿತವಾಯಿತು. ಆದರೆ ಐದು ಕೊಠಡಿಗಳ ಶಾಲಾ ದುರಸ್ತಿ ಕಾಮಗಾರಿ ಆರಂಭವಾಗಲಿಲ್ಲ’ ಎಂದರು ಗ್ರಾಮಸ್ಥರು.</p>.<p>‘ದೀಡ ತಿಂಗಳ ಸಾಲಿ ಸೂಟಿ ಇತ್ತು. ಸೂಟ್ಯಾಗ ಸಾಲಿ ಕಟ್ಟಡ ನಿರ್ಮಾಣ ಮತ್ತ ಸಾಲಿ ಕಟ್ಟಡ ದುರಸ್ತಿ ಮಾಡಬೇಕಿತ್ತು. ಸಾಲಿ ಚಾಲೂ ಆದರೂ ಇನ್ನೂ ಹೊಸ ಕೋಲಿ ಕಟ್ಟಡ ಮುಗಿದಿಲ್ಲ ಮತ್ತು ದುರಸ್ತಿ ಕೆಲಸ ನಡೆದಿಲ್ಲ. ಮಕ್ಕಳಿಗೆ ಬಹಳಾ ತೊಂದರಿ ಆಗೈತಿ. ಕುಂದ್ರಾಕ ಜಾಗಾ ಇಲ್ಲ ಕಲ್ಯಾಣ ಮಂಟಪ ಗುಡಿ ಗುಂಡಾರದಾಗ ಸಾಲಿ ನೆಡಸಬೇಕಾಗೈತಿ’ ಎಂದು ಶಾಲಾ ಸುಧಾರಣಾ ಸಮಿತಿ ಸದಸ್ಯ ರುದ್ರಗೌಡ ರೋಣದ ಬೇಸರ ವ್ಯಕ್ತಪಡಿಸಿದರು.</p>.<p>‘ಮಕ್ಕಳಿಗೆ ಪಾಠ ಬೋಧನೆ ಮಾಡಲು ಕೊಠಡಿಗಳ ಕೊರತೆ ಇದೆ. ಎರಡು ಕೊಠಡಿಗಳು ಮಾತ್ರ ಇವೆ. ಒಂದು ಕೊಠಡಿ ದುರಸ್ತಿ ಮಾಡಿಸಿರುವೆ. ವರ್ಗವಾಗಿ ಈ ಶಾಲೆಗೆ ಹೊಸದಾಗಿ ಬಂದಿರುವೆ. ನೂತನ ಕಟ್ಟಡದ ಬಗ್ಗೆ ಮಾಹಿತಿ ಇಲ್ಲ. ಈಗ ಎರಡು ಕೊಠಡಿಯಲ್ಲಿ ತರಗತಿಗಳನ್ನು ನಡೆಸುತ್ತೇವೆ. ಶಾಲಾ ಸುಧಾರಣಾ ಸಮಿತಿ ಸದಸ್ಯರನ್ನು ಕೇಳಿ ಶಿಕ್ಷಣ ಇಲಾಖೆ ಅಧಿಕಾರಿಗಳ ತಿಳಿಸುವೆ’ ಎಂದು ಮುಖ್ಯ ಶಿಕ್ಷಕ ಹೇಳಿದರು.</p>.<p> 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 2 ಕೊಠಡಿ ಮಾತ್ರ ಲಭ್ಯ ಅರ್ಧಕ್ಕೆ ನಿಂತ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಆರಂಭವಾಗದ ಶಾಲಾ ಕೊಠಡಿ ದುರಸ್ತಿ ಕಾಮಗಾರಿ</p>.<div><blockquote>ನೂತನ ಶಾಲಾ ಕಟ್ಟಡವನ್ನು ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಕಟ್ಟಡ ಕಾಮಗಾರಿ ಬಗ್ಗೆ ಪರಿಶೀಲಿಸಲಾಗುವುದು </blockquote><span class="attribution">ಕೇಶವ ಪೆಟ್ಲೂರ ಬಿಇಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>