<p><strong>ಬಾದಾಮಿ:</strong> ಬಾಗಲಕೋಟೆ ರಸ್ತೆಯ ಹಿರೇಮುಚ್ಚಳಗುಡ್ಡ ಗ್ರಾಮದ ಸಮೀಪ ಹಲಕುರ್ಕಿ ಗ್ರಾಮದ ರೈತ ಈಶ್ವರಪ್ಪ ವೀರಭದ್ರಪ್ಪ ಕಟಗೇರಿ ಎರಡು ಎಕರೆ ಹೊಲದಲ್ಲಿ ದ್ರಾಕ್ಷಿ ಬೆಳೆಯನ್ನು ಸೊಂಪಾಗಿ ಬೆಳೆದಿದ್ದಾರೆ. ದ್ರಾಕ್ಷಿ ಹಣ್ಣಿನ ಗೊನೆಗಳು ಬಳ್ಳಿಗೆ ಭಾರವಾಗಿ ಜೋತು ಬಿದ್ದಿವೆ.</p><p>ರೈತ ಈಶ್ವರಪ್ಪ ತಮ್ಮ ಹೊಲದಲ್ಲಿ ನೀರಾವರಿ ಮತ್ತು ಒಣಬೇಸಾಯದಿಂದ ಸಾವಯವ ಕೃಷಿಯೊಂದಿಗೆ ಸಮಗ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಒಬ್ಬ ಮಾದರಿ ರೈತರಾಗಿ ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.</p><p>ತಮ್ಮ 15 ಎಕರೆ ಹೊಲದಲ್ಲಿ 10 ಎಕರೆ ಪ್ರದೇಶದಲ್ಲಿ ಮಳೆಯಾಶ್ರಿತದಲ್ಲಿ ಶೇಂಗಾ, ಮೆಕ್ಕೆ ಜೋಳ, ತೊಗರಿ ಬೆಳೆಯುವರು. 5 ಎಕರೆ ಪ್ರದೇಶದಲ್ಲಿ ನೀರಾವರಿ ಮೂಲಕ ಪಪ್ಪಾಯಿ, ದಾಳಿಂಬೆ ಮತ್ತು ದ್ರಾಕ್ಷಿ ಹಣ್ಣನ್ನು ಬೆಳೆದಿದ್ದಾರೆ.</p><p>15 ವರ್ಷಗಳ ಹಿಂದೆಯೇ ಎರಡು ಎಕರೆ ಪ್ರದೇಶದಲ್ಲಿ ಮಾಣಿಕಚಮನ್ ತಳಿಯ ದ್ರಾಕ್ಷಿ ತಳಿ ಬೆಳೆಯ ಬಳ್ಳಿಯನ್ನು ಬೆಳೆಸಿದ್ದಾರೆ. 15 ವರ್ಷಗಳಿಂದ ದ್ರಾಕ್ಷಿ ಹಣ್ಣಿನ ಫಸಲಿನ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ.</p><p>ಎರಡು ಎಕರೆ ಪ್ರದೇಶದಲ್ಲಿ ಎರಡು ಸಾವಿರ ದ್ರಾಕ್ಷಿ ಸಸಿಗಳನ್ನು ನೆಡಲಾಗಿದೆ. ಬಳ್ಳಿ ಬೆಳೆಯಲು ಆಸರೆಗೆ ಕಲ್ಲನ್ನು ನೆಟ್ಟು ಸುತ್ತ ಸಂತಿ ಬೇಲಿಯನ್ನು ಹಾಕಲಾಗಿದೆ. ಮೇಲೆಯೂ ತಂತಿಯನ್ನು ಹಾಕಿ ಮಳೆಗೆ ಸಂರಕ್ಷಿಸಿದ್ದಾರೆ.</p><p>ಆರಂಭದಿಂದಲೂ ದ್ರಾಕ್ಷಿ, ಪಪ್ಪಾಯಿ ಮತ್ತು ದಾಳಿಂಬೆ ಗಿಡಕ್ಕೆ ಹನಿ ನೀರಾವರಿ ಅಳವಡಿಸಲಾಗಿದೆ. ಎರಡು ಕೊಳವೆ ಬಾವಿಗಳ ಮೂಲಕ ನೀರು ಹರಿಸುತ್ತಿದ್ದಾರೆ.</p><p>‘ದ್ರಾಕ್ಷಿ ಬಳ್ಳಿ ಹಾಕಿದ ಮೂರು ವರ್ಷದ ನಂತರ ಫಸಲು ಆರಂಭವಾಗುವುದು. ಹೊಲದ ತುಂಬೆಲ್ಲ ಬಳ್ಳಿಯ ಆಸರೆಗೆ ಕಲ್ಲು ಮತ್ತು ತಂತಿಯನ್ನು ಜೋಡಿಸುವುದು. ಆಳಿನ ಖರ್ಚು ಸೇರಿ ಒಟ್ಟು ರೂ. 5 ಲಕ್ಷ ಬಂಡವಾಳ ಹಾಕಬೇಕು ಆರಂಭದಲ್ಲಿ ಚಿಕ್ಕ ಬಳ್ಳಿ ಇರುವುದರಿಂದ ಇಳುವರಿ ಕಡಿಮೆ ಬರುವುದು. ಬಳ್ಳಿ ಹಬ್ಬಿದಂತೆ ಇಳುವರಿ ಅಧಿಕ ಬರುವುದು ’ ಎಂದು ತಿಳಿಸಿದರು.</p><p>ದ್ರಾಕ್ಷಿ ಬೆಳೆಗೆ ಸಾವಯವ ಮತ್ತು ಎರೆಹುಳು ಗೊಬ್ಬರವನ್ನು ಬಳಸಲಾಗುವುದರಿಂದ ಹಣ್ಣಿನ ರುಚಿ ಹೆಚ್ಚಾಗುವುದು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರುವುದು. ಈ ವರ್ಷ ಎಕರೆಗೆ 16 ಟನ್ ಇಳುವರಿ ಬಂದು ಖರ್ಚು ತೆಗೆದು ₹ 8 ಲಕ್ಷ ಆದಾಯವಾಗಿದೆ ’ ಎಂದರು.</p><p>‘ ರೈತ ಶ್ರಮವಹಿಸಿ ಭೂತಾಯಿಯ ಮಡಿಲಿಗೆ ಬೆವರು ಸುರಿಸಿ ದುಡಿದರೆ ಭೂತಾಯಿ ರೈತರನ್ನು ಎಂದೂ ಕೈಬಿಡೋದಿಲ್ಲ ರಕ್ಷಿಸುವಳು. ರೈತರು ಹೊಲದಲ್ಲಿ ಶ್ರಮವಹಿಸಬೇಕು ´ ಎಂದು ರೈತ ಸಮುದಾಯಕ್ಕೆ ವಿನಂತಿಸಿದರು.</p><p>‘ ನಾ ಪಿಯುಸಿ ಮುಗಿಸಿದ ಕೂಡಲೇ ಸಾಲಿ ಕಲಿಯಾಕ ಆಗಲಿಲ್ಲ. ರೈತನಾಗಿ ದುಡಿಯಲು ಆರಂಭಿಸಿದೆ.ನಲವತ್ತು ವರ್ಸದಿಂದ ಒಕ್ಕಲುತನ ಮಾಡಿರುವೆ. ನಾನಂತೂ ಓದಲಿಲ್ಲ ಮಕ್ಕಳನ್ನು ಓದಿಸಬೇಕು ಎಂದು ಮೂವರು ಮಕ್ಕಳಲ್ಲಿ ಒಬ್ಬಳು ಸರ್ಕಾರಿ ಕಾಲೇಜಿನ ಉಪನ್ಯಾಸಕಿ, ಒಬ್ಬ ಮಗಳು ಮತ್ತು ಮಗ ಎಂ.ಬಿ.ಬಿ.ಎಸ್. ಓದುತ್ತಿದ್ದಾರೆ ’ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಬಾಗಲಕೋಟೆ ರಸ್ತೆಯ ಹಿರೇಮುಚ್ಚಳಗುಡ್ಡ ಗ್ರಾಮದ ಸಮೀಪ ಹಲಕುರ್ಕಿ ಗ್ರಾಮದ ರೈತ ಈಶ್ವರಪ್ಪ ವೀರಭದ್ರಪ್ಪ ಕಟಗೇರಿ ಎರಡು ಎಕರೆ ಹೊಲದಲ್ಲಿ ದ್ರಾಕ್ಷಿ ಬೆಳೆಯನ್ನು ಸೊಂಪಾಗಿ ಬೆಳೆದಿದ್ದಾರೆ. ದ್ರಾಕ್ಷಿ ಹಣ್ಣಿನ ಗೊನೆಗಳು ಬಳ್ಳಿಗೆ ಭಾರವಾಗಿ ಜೋತು ಬಿದ್ದಿವೆ.</p><p>ರೈತ ಈಶ್ವರಪ್ಪ ತಮ್ಮ ಹೊಲದಲ್ಲಿ ನೀರಾವರಿ ಮತ್ತು ಒಣಬೇಸಾಯದಿಂದ ಸಾವಯವ ಕೃಷಿಯೊಂದಿಗೆ ಸಮಗ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಒಬ್ಬ ಮಾದರಿ ರೈತರಾಗಿ ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.</p><p>ತಮ್ಮ 15 ಎಕರೆ ಹೊಲದಲ್ಲಿ 10 ಎಕರೆ ಪ್ರದೇಶದಲ್ಲಿ ಮಳೆಯಾಶ್ರಿತದಲ್ಲಿ ಶೇಂಗಾ, ಮೆಕ್ಕೆ ಜೋಳ, ತೊಗರಿ ಬೆಳೆಯುವರು. 5 ಎಕರೆ ಪ್ರದೇಶದಲ್ಲಿ ನೀರಾವರಿ ಮೂಲಕ ಪಪ್ಪಾಯಿ, ದಾಳಿಂಬೆ ಮತ್ತು ದ್ರಾಕ್ಷಿ ಹಣ್ಣನ್ನು ಬೆಳೆದಿದ್ದಾರೆ.</p><p>15 ವರ್ಷಗಳ ಹಿಂದೆಯೇ ಎರಡು ಎಕರೆ ಪ್ರದೇಶದಲ್ಲಿ ಮಾಣಿಕಚಮನ್ ತಳಿಯ ದ್ರಾಕ್ಷಿ ತಳಿ ಬೆಳೆಯ ಬಳ್ಳಿಯನ್ನು ಬೆಳೆಸಿದ್ದಾರೆ. 15 ವರ್ಷಗಳಿಂದ ದ್ರಾಕ್ಷಿ ಹಣ್ಣಿನ ಫಸಲಿನ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ.</p><p>ಎರಡು ಎಕರೆ ಪ್ರದೇಶದಲ್ಲಿ ಎರಡು ಸಾವಿರ ದ್ರಾಕ್ಷಿ ಸಸಿಗಳನ್ನು ನೆಡಲಾಗಿದೆ. ಬಳ್ಳಿ ಬೆಳೆಯಲು ಆಸರೆಗೆ ಕಲ್ಲನ್ನು ನೆಟ್ಟು ಸುತ್ತ ಸಂತಿ ಬೇಲಿಯನ್ನು ಹಾಕಲಾಗಿದೆ. ಮೇಲೆಯೂ ತಂತಿಯನ್ನು ಹಾಕಿ ಮಳೆಗೆ ಸಂರಕ್ಷಿಸಿದ್ದಾರೆ.</p><p>ಆರಂಭದಿಂದಲೂ ದ್ರಾಕ್ಷಿ, ಪಪ್ಪಾಯಿ ಮತ್ತು ದಾಳಿಂಬೆ ಗಿಡಕ್ಕೆ ಹನಿ ನೀರಾವರಿ ಅಳವಡಿಸಲಾಗಿದೆ. ಎರಡು ಕೊಳವೆ ಬಾವಿಗಳ ಮೂಲಕ ನೀರು ಹರಿಸುತ್ತಿದ್ದಾರೆ.</p><p>‘ದ್ರಾಕ್ಷಿ ಬಳ್ಳಿ ಹಾಕಿದ ಮೂರು ವರ್ಷದ ನಂತರ ಫಸಲು ಆರಂಭವಾಗುವುದು. ಹೊಲದ ತುಂಬೆಲ್ಲ ಬಳ್ಳಿಯ ಆಸರೆಗೆ ಕಲ್ಲು ಮತ್ತು ತಂತಿಯನ್ನು ಜೋಡಿಸುವುದು. ಆಳಿನ ಖರ್ಚು ಸೇರಿ ಒಟ್ಟು ರೂ. 5 ಲಕ್ಷ ಬಂಡವಾಳ ಹಾಕಬೇಕು ಆರಂಭದಲ್ಲಿ ಚಿಕ್ಕ ಬಳ್ಳಿ ಇರುವುದರಿಂದ ಇಳುವರಿ ಕಡಿಮೆ ಬರುವುದು. ಬಳ್ಳಿ ಹಬ್ಬಿದಂತೆ ಇಳುವರಿ ಅಧಿಕ ಬರುವುದು ’ ಎಂದು ತಿಳಿಸಿದರು.</p><p>ದ್ರಾಕ್ಷಿ ಬೆಳೆಗೆ ಸಾವಯವ ಮತ್ತು ಎರೆಹುಳು ಗೊಬ್ಬರವನ್ನು ಬಳಸಲಾಗುವುದರಿಂದ ಹಣ್ಣಿನ ರುಚಿ ಹೆಚ್ಚಾಗುವುದು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರುವುದು. ಈ ವರ್ಷ ಎಕರೆಗೆ 16 ಟನ್ ಇಳುವರಿ ಬಂದು ಖರ್ಚು ತೆಗೆದು ₹ 8 ಲಕ್ಷ ಆದಾಯವಾಗಿದೆ ’ ಎಂದರು.</p><p>‘ ರೈತ ಶ್ರಮವಹಿಸಿ ಭೂತಾಯಿಯ ಮಡಿಲಿಗೆ ಬೆವರು ಸುರಿಸಿ ದುಡಿದರೆ ಭೂತಾಯಿ ರೈತರನ್ನು ಎಂದೂ ಕೈಬಿಡೋದಿಲ್ಲ ರಕ್ಷಿಸುವಳು. ರೈತರು ಹೊಲದಲ್ಲಿ ಶ್ರಮವಹಿಸಬೇಕು ´ ಎಂದು ರೈತ ಸಮುದಾಯಕ್ಕೆ ವಿನಂತಿಸಿದರು.</p><p>‘ ನಾ ಪಿಯುಸಿ ಮುಗಿಸಿದ ಕೂಡಲೇ ಸಾಲಿ ಕಲಿಯಾಕ ಆಗಲಿಲ್ಲ. ರೈತನಾಗಿ ದುಡಿಯಲು ಆರಂಭಿಸಿದೆ.ನಲವತ್ತು ವರ್ಸದಿಂದ ಒಕ್ಕಲುತನ ಮಾಡಿರುವೆ. ನಾನಂತೂ ಓದಲಿಲ್ಲ ಮಕ್ಕಳನ್ನು ಓದಿಸಬೇಕು ಎಂದು ಮೂವರು ಮಕ್ಕಳಲ್ಲಿ ಒಬ್ಬಳು ಸರ್ಕಾರಿ ಕಾಲೇಜಿನ ಉಪನ್ಯಾಸಕಿ, ಒಬ್ಬ ಮಗಳು ಮತ್ತು ಮಗ ಎಂ.ಬಿ.ಬಿ.ಎಸ್. ಓದುತ್ತಿದ್ದಾರೆ ’ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>