<p>ಬಾದಾಮಿ: ಇಲ್ಲಿನ ಶಿವಯೋಗಮಂದಿರ ಶಾಖಾ ಮಠದ ಆವರಣದಲ್ಲಿ ಸಿರಿಗಂಧ ಸಂಸ್ಕೃತಿ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಸಂಭ್ರಮದ ಆಚರಣೆ ಅಂಗವಾಗಿ ಶನಿವಾರ ಚೈತ್ರ ನಿನಾದ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.</p>.<p>ಶಾಸ್ತ್ರೀಯ ಸಂಗೀತ, ಶರಣರ ವಚನಗಳು, ದಾಸರ ಪದ್ಯಗಳು, ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಸಂಗೀತ ಕಲಾವಿದ ಜಯತೀರ್ಥ ತಾಸಗಾಂವ ಸುಶ್ರಾವ್ತವಾಗಿ ಹಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.</p>.<p>ಲಕ್ಷ್ಮಿ ಕುಲಕರ್ಣಿ ಮತ್ತು ವೈಷ್ಣವಿ ಜಾಡಗೌಡ ಬಾಲಕಿಯರು ಭರತನಾಟ್ಯವನ್ನು ಪ್ರದರ್ಶಿಸಿದರು. ಹಾರ್ಮೋನಿಯಂ ಚಂದ್ರಶೇಖರ್ ಆಲೂರ ಮತ್ತು ಪ್ರಸಾದ ಕುಲಕರ್ಣಿ ತಬಲಾ ಸಾತ್ ನೀಡಿದರು.</p>.<p>ಸಿರಿಗಂಧ ಸಂಸ್ಕೃತಿ ಬಳಗದ ಗೌರವ ಅಧ್ಯಕ್ಷ ಡಿ.ಎಂ. ಪೈಲ ಅಧ್ಯಕ್ಷ ದಾಜೀಬಾ ಜಗದಾಳೆ ಯುಗಾದಿ ಹಬ್ಬದ ಮಹತ್ವದ ಕುರಿತು ಹೇಳಿದರು.</p>.<p>ಸಿರಿಗಂಧ ಸಂಸ್ಕೃತಿ ಬಳಗದ ಸದಸ್ಯರು ಮತ್ತು ಸಂಗೀತ ಆಸಕ್ತರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-19-1913784674</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾದಾಮಿ: ಇಲ್ಲಿನ ಶಿವಯೋಗಮಂದಿರ ಶಾಖಾ ಮಠದ ಆವರಣದಲ್ಲಿ ಸಿರಿಗಂಧ ಸಂಸ್ಕೃತಿ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಸಂಭ್ರಮದ ಆಚರಣೆ ಅಂಗವಾಗಿ ಶನಿವಾರ ಚೈತ್ರ ನಿನಾದ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.</p>.<p>ಶಾಸ್ತ್ರೀಯ ಸಂಗೀತ, ಶರಣರ ವಚನಗಳು, ದಾಸರ ಪದ್ಯಗಳು, ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಸಂಗೀತ ಕಲಾವಿದ ಜಯತೀರ್ಥ ತಾಸಗಾಂವ ಸುಶ್ರಾವ್ತವಾಗಿ ಹಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.</p>.<p>ಲಕ್ಷ್ಮಿ ಕುಲಕರ್ಣಿ ಮತ್ತು ವೈಷ್ಣವಿ ಜಾಡಗೌಡ ಬಾಲಕಿಯರು ಭರತನಾಟ್ಯವನ್ನು ಪ್ರದರ್ಶಿಸಿದರು. ಹಾರ್ಮೋನಿಯಂ ಚಂದ್ರಶೇಖರ್ ಆಲೂರ ಮತ್ತು ಪ್ರಸಾದ ಕುಲಕರ್ಣಿ ತಬಲಾ ಸಾತ್ ನೀಡಿದರು.</p>.<p>ಸಿರಿಗಂಧ ಸಂಸ್ಕೃತಿ ಬಳಗದ ಗೌರವ ಅಧ್ಯಕ್ಷ ಡಿ.ಎಂ. ಪೈಲ ಅಧ್ಯಕ್ಷ ದಾಜೀಬಾ ಜಗದಾಳೆ ಯುಗಾದಿ ಹಬ್ಬದ ಮಹತ್ವದ ಕುರಿತು ಹೇಳಿದರು.</p>.<p>ಸಿರಿಗಂಧ ಸಂಸ್ಕೃತಿ ಬಳಗದ ಸದಸ್ಯರು ಮತ್ತು ಸಂಗೀತ ಆಸಕ್ತರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-19-1913784674</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>