‘ಮದುವೆ ಯಾಕೆ ಆಗಿಲ್ಲ. ಪೊಲೀಸರೇ ಮದುವೆ ಮಾಡಬೇಕೇ? ಎಂದು ಗಾಯಾಳುವಿಗೆ ಪ್ರಶ್ನಿಸಿದ ಅವರು, ಹೆಣ್ಣು ನೋಡಿರಿ ಎಂದು ಅಧಿಕಾರಿಗಳಿಗೆ ಹೇಳಿದರು. ಮಾತು ಮುಂದುವರಿಸಿ, ‘ಮದುವೆ ಆಗಬೇಕು. ಹಿಂದೆ ಯಾರಿಲ್ಲ, ಮುಂದೆ ಯಾರಿಲ್ಲ ಎಂದರೆ ಯೋಚನೆ ಮಾಡುವುದಿಲ್ಲ. ಮದುವೆಯಾದರೆ ಹೆಂಡತಿ, ಮಕ್ಕಳು ಇದ್ದಾರೆ. ನಮಗೆ ಹೆಚ್ಚು ಕಡಿಮೆಯಾದರೆ ಅವರನ್ನು ಯಾರೂ ನೋಡಿಕೊಳ್ಳುತ್ತಾರೆ ಎಂಬ ಯೋಚನೆ ಬರುತ್ತದೆ. ಪ್ರಪಂಚದಲ್ಲಿ ಸಮಸ್ಯೆಗಳು ಏನಿವೆ. ಸಂಬಂಧಗಳ ಬೆಲೆ ಗೊತ್ತಾಗುತ್ತದೆ. ಬೇಗ ಮದುವೆಯಾಗಲಿ. ದೇವರು ಒಳ್ಳೆಯದು ಮಾಡಲಿ’ ಎಂದು ಹಾರೈಸಿದರು.