ಬಾಗಲಕೋಟೆ: ಘಟಪ್ರಭಾನದಿಯಲ್ಲಿ ಈಜಲು ಹೋದ, ತಾಲ್ಲೂಕಿನ ಛಬ್ಬಿ ಗ್ರಾಮದ ಸಿದ್ದರಾಮಪ್ಪ ಪೂಜಾರಿ (18) ಎಂಬಾತನನ್ನು ಭಾನುವಾರ ಮೊಸಳೆಯೊಂದು ಎಳೆದೊಯ್ದಿದೆ.
ಸ್ನೇಹಿತರಾದ ಶಂಕರಲಿಂಗ ಬೀಳಗಿ, ರಮೇಶ ತುಂಬರಮಟ್ಟಿ, ಶಿವಕುಮಾರ ಬೀಳಗಿ ಎಂಬುವವರ ಜೊತೆ ಸಿದ್ದರಾಮಪ್ಪ ಈಜಲು ತೆರಳಿದ್ದರು. ಈ ವೇಳೆ ಮೊಸಳೆ ದಾಳಿ ಮಾಡಿತ್ತು. ಯುವಕನಿಗಾಗಿ ಶೋಧ ನಡೆದಿದೆ.