ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಸೆರೆ ಸಿಕ್ಕ ವಾನರ!

ಅರೆವಳಿಕೆ ನೀಡಿ ಹಿಡಿದು ಬೋನಿಗೆ ಹಾಕಿದ ಅರಣ್ಯಇಲಾಖೆ ಸಿಬ್ಬಂದಿ
Last Updated 7 ಡಿಸೆಂಬರ್ 2019, 9:39 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ಎಪಿಎಂಸಿಯ ಸಿ.ವಿ.ಚರಂತಿಮಠ ಕಲ್ಯಾಣಮಂಟಪದಲ್ಲಿ ಕರೆಯದೇ ಮದುವೆ ಮಂಟಪಕ್ಕೆ ಬಂದು ಅತಿಥಿ–ಅಭ್ಯಾಗತರಿಗೆ ಮುಜುಗರವನ್ನುಂಟು ಮಾಡುತ್ತಿದ್ದ ವಾನರ ಕೊನೆಗೂ ಸೆರೆ ಸಿಕ್ಕಿದ್ದಾನೆ.

ಕಲ್ಯಾಣಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಮದುವೆ ಸಮಾರಂಭಕ್ಕೆಎಂದಿನಂತೆಯೇ ರಾಜಠೀವಿಯಲ್ಲಿ ಬಂದ ಮಂಗ ಅತಿಥಿಗಳ ಸಾಲಿನಲ್ಲಿ ಆಸೀನವಾಗಿತ್ತು. ಅದನ್ನು ಕಂಡ ಕಲ್ಯಾಣಮಂಟಪದ ಸಿಬ್ಬಂದಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಪಶುವೈದ್ಯರೊಂದಿಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ಕೊನೆಗೂ ಚಾಣಾಕ್ಷ್ಯ ಮಂಗವನ್ನು ಸೆರೆಹಿಡಿದು ಬೋನಿಗೆ ಹಾಕಿದರು. ಇದಕ್ಕೆ ನಗರದ ಹಂದಿ ಹಿಡಿಯುವವರ ಎರಡು ತಂಡಗಳು ನೆರವಾದವು.

ಕಳೆದೊಂದು ವಾರದಿಂದ ಕೈಗೆ ಸಿಗದೇ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದ ಮಂಗ ಮದುವೆ ಮನೆಯವರಿಗೆ ತಲೆನೋವಾಗಿತ್ತು. ಯಾರಿಗೂ ಉಪಟಳ ಮಾಡದಿದ್ದರೂ ಅದರ ಉಪಸ್ಥಿತಿಯೇ ಮದುವೆಗೆ ಬಂದವರ ನೆಮ್ಮದಿ ಕೆಡಿಸುತ್ತಿತ್ತು. ಹೀಗಾಗಿ ಅದನ್ನು ಹಿಡಿಯಲು ಅರಣ್ಯ ಇಲಾಖೆಯ ನೆರವು ಕೋರಲಾಗಿತ್ತು.

ಪಶುವೈದ್ಯರು ಅರೆವಳಿಕೆ ಮದ್ದು ನೀಡಿ ಮಂಗನ ಹಿಡಿಯಲು ನೆರವಾದರು. ಬೋನಿನಲ್ಲಿ ಸೆರೆ ಹಿಡಿದ ಮಂಗನನ್ನು ದಾಂಡೇಲಿ ಕಾಡಿಗೆ ಒಯ್ದು ಬಿಡಲಾಗುವುದು ಎಂದು ಕಲ್ಯಾಣ ಮಂಟಪದ ವ್ಯವಸ್ಥಾಪಕ ಮುರುಗೇಶ ಕುಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT