<p>ಬಾಗಲಕೋಟೆ: ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸೋಮವಾರ ಬಾಗಲಕೋಟೆಯಲ್ಲಿ ಬೃಹತ್ ಬೈಕ್ ರ್ಯಾಲಿ ಮಾಡಲಾಯಿತು.</p>.<p>ಸತ್ಯ ಶೋಧಕ ಸಂಘ, ಸಾಮ್ರಾಟ ಅಶೋಕ ಕ್ರೀಡಾ ಸಂಸ್ಥೆ, ಅಂಬೇಡ್ಕರ್ ಅಭಿಮಾನಿಗಳು ನೂರಾರು ಮಂದಿ ಭಾಗವಹಿಸಿ, ಜೈಭೀಮ್ ಘೋಷಣೆ ಕೂಗಿದರು.</p>.<p>ಅಂಬೇಡ್ಕರ್ ನಗರದಿಂದ ಆರಂಭವಾದ ರ್ಯಾಲಿ ಪಂಕಾ ಮಸೀದಿ, ಪೊಲೀಸ್ ಚೌಕ್ ಮಾರ್ಗವಾಗಿ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತದ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನವನಗರದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.</p>.<p>ಸತ್ಯ ಶೋಧಕ ಸಂಘದ ರಾಜ್ಯ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ‘ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದೆ’ ಎಂದು ಹೇಳಿದರು.</p>.<p>ಜಿಲ್ಲಾ ಅಧ್ಯಕ್ಷ ಅರುಣ ಗರಸಂಗಿ ಮಾತನಾಡಿ, ‘ಯುವಕರು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ರಾಮಪ್ಪ ನಾರಾಯಣಿ, ಗಿರಿಯಪ್ಪ ನಾರಾಯಣಿ, ದೀಲಿಪ ಡವಳೇಶ್ವರ, ಬಂಡೆಪ್ಪ ನಾರಾಯಣಿ, ಮುತ್ತಪ್ಪ ಆರೆತ್ತಿನವರ, ರಾಮು ನಾರಾಯಣಿ, ಕಿರಣ ನೀಲನಾಯಕ, ರಾಮಣ್ಣ ಹೊಸಳ್ಳಿ, ಸುನೀಲ ಬಂಡಿ, ಸಿದ್ದಣ್ಣ ಮಾವಿನತೋಟ, ಕುಮಾರ ಬಿಚ್ಚೇಲಿ, ನಿಂಗಪ್ಪ ಅಂಬಿಗೇರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-19-1687875203</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸೋಮವಾರ ಬಾಗಲಕೋಟೆಯಲ್ಲಿ ಬೃಹತ್ ಬೈಕ್ ರ್ಯಾಲಿ ಮಾಡಲಾಯಿತು.</p>.<p>ಸತ್ಯ ಶೋಧಕ ಸಂಘ, ಸಾಮ್ರಾಟ ಅಶೋಕ ಕ್ರೀಡಾ ಸಂಸ್ಥೆ, ಅಂಬೇಡ್ಕರ್ ಅಭಿಮಾನಿಗಳು ನೂರಾರು ಮಂದಿ ಭಾಗವಹಿಸಿ, ಜೈಭೀಮ್ ಘೋಷಣೆ ಕೂಗಿದರು.</p>.<p>ಅಂಬೇಡ್ಕರ್ ನಗರದಿಂದ ಆರಂಭವಾದ ರ್ಯಾಲಿ ಪಂಕಾ ಮಸೀದಿ, ಪೊಲೀಸ್ ಚೌಕ್ ಮಾರ್ಗವಾಗಿ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತದ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನವನಗರದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.</p>.<p>ಸತ್ಯ ಶೋಧಕ ಸಂಘದ ರಾಜ್ಯ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ‘ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದೆ’ ಎಂದು ಹೇಳಿದರು.</p>.<p>ಜಿಲ್ಲಾ ಅಧ್ಯಕ್ಷ ಅರುಣ ಗರಸಂಗಿ ಮಾತನಾಡಿ, ‘ಯುವಕರು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ರಾಮಪ್ಪ ನಾರಾಯಣಿ, ಗಿರಿಯಪ್ಪ ನಾರಾಯಣಿ, ದೀಲಿಪ ಡವಳೇಶ್ವರ, ಬಂಡೆಪ್ಪ ನಾರಾಯಣಿ, ಮುತ್ತಪ್ಪ ಆರೆತ್ತಿನವರ, ರಾಮು ನಾರಾಯಣಿ, ಕಿರಣ ನೀಲನಾಯಕ, ರಾಮಣ್ಣ ಹೊಸಳ್ಳಿ, ಸುನೀಲ ಬಂಡಿ, ಸಿದ್ದಣ್ಣ ಮಾವಿನತೋಟ, ಕುಮಾರ ಬಿಚ್ಚೇಲಿ, ನಿಂಗಪ್ಪ ಅಂಬಿಗೇರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-19-1687875203</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>