<p><strong>ಬಾಗಲಕೋಟೆ:</strong> ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಕಳ್ಳತನ ಯತ್ನ ತಡೆಯಲು ಮುಂದಾದವರ ಮೇಲೆ ಗುಂಡು ಹಾರಿಸಲಾಗಿದೆ.</p><p>ಆರೋಪಿ ಪ್ರಶಾಂತ ಸಿದ್ದರಾಮ ನಾವಿ ಚಡಚಣ ತಾಲ್ಲೂಕಿನ ದೇವರನಿಂಬರ್ಗಿ ಗ್ರಾಮದ ನಿವಾಸಿ.</p><p>ಹೊಳೆಪ್ಪ ಕರಿಯಪ್ಪ ಮುಗಳಿ (67) ಹಾಗೂ ಬಸವ್ವ ಹೊಳಿಯಪ್ಪ ಮುಗಳಿ (60) ದಂಪತಿ ಗ್ರಾಮದಲ್ಲಿ ಮನೆಯ ಮುಂದೆ ಮಲಗಿದ್ದರು. ಆ ವೇಳೆ, ಹೊಳೆಪ್ಪ ಕರಿಯಪ್ಪ ಮುಗಳಿ ಅವರ ಮೈಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಕದಿಯಲು ಪರಿಶೀಲಿಸುತ್ತಿದ್ದಾಗ ಆರೋಪಿಯನ್ನು ಹೊಳೆಪ್ಪ ಅವರು ಹಿಡಿದುಕೊಂಡಿದ್ದಾರೆ.</p><p>ಆಗ ಬಿಡಿಸಿಕೊಳ್ಳುವ ಯತ್ನಿಸಿದ ಆರೋಪಿ, ತನ್ನ ಬಳಿ ಹೊಂದಿದ್ದ ದೇಸಿ ನಿರ್ಮಿತ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಬಸವ್ವ ಅವರ ಕಾಲಿಗೆ ತಗುಲಿ ಗಾಯವಾಗಿದೆ.</p><p>ಗಲಾಟೆಯ ಶಬ್ದ ಕೇಳಿ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ</p><p>ಗಾಯಗೊಂಡ ಬಸವ್ವ ಮುಗಳಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. </p><p>ಆರೋಪಿ ಒಬ್ಬನೇ ಮೋಟಾರ್ ಸೈಕಲ್ನಲ್ಲಿ ಬಂದಿದ್ದು, ಆತನಿಂದ ಪಿಸ್ತೂಲು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಕಳ್ಳತನ ಯತ್ನ ತಡೆಯಲು ಮುಂದಾದವರ ಮೇಲೆ ಗುಂಡು ಹಾರಿಸಲಾಗಿದೆ.</p><p>ಆರೋಪಿ ಪ್ರಶಾಂತ ಸಿದ್ದರಾಮ ನಾವಿ ಚಡಚಣ ತಾಲ್ಲೂಕಿನ ದೇವರನಿಂಬರ್ಗಿ ಗ್ರಾಮದ ನಿವಾಸಿ.</p><p>ಹೊಳೆಪ್ಪ ಕರಿಯಪ್ಪ ಮುಗಳಿ (67) ಹಾಗೂ ಬಸವ್ವ ಹೊಳಿಯಪ್ಪ ಮುಗಳಿ (60) ದಂಪತಿ ಗ್ರಾಮದಲ್ಲಿ ಮನೆಯ ಮುಂದೆ ಮಲಗಿದ್ದರು. ಆ ವೇಳೆ, ಹೊಳೆಪ್ಪ ಕರಿಯಪ್ಪ ಮುಗಳಿ ಅವರ ಮೈಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಕದಿಯಲು ಪರಿಶೀಲಿಸುತ್ತಿದ್ದಾಗ ಆರೋಪಿಯನ್ನು ಹೊಳೆಪ್ಪ ಅವರು ಹಿಡಿದುಕೊಂಡಿದ್ದಾರೆ.</p><p>ಆಗ ಬಿಡಿಸಿಕೊಳ್ಳುವ ಯತ್ನಿಸಿದ ಆರೋಪಿ, ತನ್ನ ಬಳಿ ಹೊಂದಿದ್ದ ದೇಸಿ ನಿರ್ಮಿತ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಬಸವ್ವ ಅವರ ಕಾಲಿಗೆ ತಗುಲಿ ಗಾಯವಾಗಿದೆ.</p><p>ಗಲಾಟೆಯ ಶಬ್ದ ಕೇಳಿ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ</p><p>ಗಾಯಗೊಂಡ ಬಸವ್ವ ಮುಗಳಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. </p><p>ಆರೋಪಿ ಒಬ್ಬನೇ ಮೋಟಾರ್ ಸೈಕಲ್ನಲ್ಲಿ ಬಂದಿದ್ದು, ಆತನಿಂದ ಪಿಸ್ತೂಲು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>