<p><strong>ಹಂದಿಗುಂದ:</strong> ಗ್ರಾಮದಲ್ಲಿ ಕ್ಷೌರದ ಅಂಗಡಿ ಇಟ್ಟುಕೊಂಡಿರುವ ಹನುಮಂತ ತಿಪ್ಪಣ್ಣ ನಂದೇಶ್ವರ ಅವರು, ತಮಗೆ ಸಿಕ್ಕಿದ್ದ ₹50 ಸಾವಿರ ಹಣವಿದ್ದ ಕೈಚೀಲವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.</p>.<p>ಕಲಾದಗಿ ನಿಲ್ದಾಣದ ಬಳಿ ಹೂ ಮಾಲೆ ಮಾರುವವರ ಅಂಗಡಿ ಪಕ್ಕದಲ್ಲಿ ಕೈ ಚೀಲ ಸಿಕ್ಕಿತ್ತು. ಅದರಲ್ಲಿ ₹50 ಸಾವಿರ ಹಣವಿತ್ತು. ಅದನ್ನು ಗಮನಿಸಿದ ಹನುಮಂತಪ್ಪ ಅಕ್ಕಪಕ್ಕದವರನ್ನು ವಿಚಾರಿಸಿದರು. ಆದರೆ, ಅದು ಯಾರಿಗೂ ಸೇರಿದ್ದಲ್ಲ ಎಂದು ಗೊತ್ತಾಯಿತು.</p>.<p>ಬಳಿಕ ಹಣವನ್ನು ಬಾಗಲಕೋಟೆಯ ಕಲಾದಗಿ ಪೊಲೀಸ್ ಠಾಣೆಯ ಸಿಬ್ಬಂದಿ ನೀಡಿ, ಪತ್ರ ಬರೆದು ಕೊಟ್ಟರು. ದುಡ್ಡು ಕಳೆದುಕೊಂಡವರು ಪತ್ತೆಯಾದ ನಂತರ ತಮ್ಮನ್ನು ಕರೆದು ಕೊಡುವಂತೆ ಕಲಾದಗಿ ಪಿಎಸ್ಐ ಪ್ರವೀಣ ಬೀಳಗಿ ಹಾಗೂ ಮಹಿಳಾ ಸಿಬ್ಬಂದಿ ಭುವನೇಶ್ವರಿ ಅವರಿಗೆ ಮನವಿ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-21-96690615</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂದಿಗುಂದ:</strong> ಗ್ರಾಮದಲ್ಲಿ ಕ್ಷೌರದ ಅಂಗಡಿ ಇಟ್ಟುಕೊಂಡಿರುವ ಹನುಮಂತ ತಿಪ್ಪಣ್ಣ ನಂದೇಶ್ವರ ಅವರು, ತಮಗೆ ಸಿಕ್ಕಿದ್ದ ₹50 ಸಾವಿರ ಹಣವಿದ್ದ ಕೈಚೀಲವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.</p>.<p>ಕಲಾದಗಿ ನಿಲ್ದಾಣದ ಬಳಿ ಹೂ ಮಾಲೆ ಮಾರುವವರ ಅಂಗಡಿ ಪಕ್ಕದಲ್ಲಿ ಕೈ ಚೀಲ ಸಿಕ್ಕಿತ್ತು. ಅದರಲ್ಲಿ ₹50 ಸಾವಿರ ಹಣವಿತ್ತು. ಅದನ್ನು ಗಮನಿಸಿದ ಹನುಮಂತಪ್ಪ ಅಕ್ಕಪಕ್ಕದವರನ್ನು ವಿಚಾರಿಸಿದರು. ಆದರೆ, ಅದು ಯಾರಿಗೂ ಸೇರಿದ್ದಲ್ಲ ಎಂದು ಗೊತ್ತಾಯಿತು.</p>.<p>ಬಳಿಕ ಹಣವನ್ನು ಬಾಗಲಕೋಟೆಯ ಕಲಾದಗಿ ಪೊಲೀಸ್ ಠಾಣೆಯ ಸಿಬ್ಬಂದಿ ನೀಡಿ, ಪತ್ರ ಬರೆದು ಕೊಟ್ಟರು. ದುಡ್ಡು ಕಳೆದುಕೊಂಡವರು ಪತ್ತೆಯಾದ ನಂತರ ತಮ್ಮನ್ನು ಕರೆದು ಕೊಡುವಂತೆ ಕಲಾದಗಿ ಪಿಎಸ್ಐ ಪ್ರವೀಣ ಬೀಳಗಿ ಹಾಗೂ ಮಹಿಳಾ ಸಿಬ್ಬಂದಿ ಭುವನೇಶ್ವರಿ ಅವರಿಗೆ ಮನವಿ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-21-96690615</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>