<p><strong>ಬಾಗಲಕೋಟೆ:</strong> ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ವೀರಣ್ಣ (ವೀರಭದ್ರಯ್ಯ) ಚರಂತಿಮಠ ಶುಕ್ರವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಗುರುವಾರ ವೀರಣ್ಣ ಅವರಿಗೆ ಟಿಕೆಟ್ ಘೋಷಿಸಿತ್ತು. ಪಕ್ಷದ ಮುಖಂಡರೊಂದಿಗೆ ಸೋಮವಾರ ಮೆರವಣಿಗೆಯಲ್ಲಿ ಬಂದು, ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು.</p>.<p>ಕಾಂಗ್ರೆಸ್ ನಿಂದ ಗೋವಿಂದರಾಜ ಬಳ್ಳಾರಿ (ಬಿ ಫಾರಂ ಸಲ್ಲಿಸಿಲ್ಲ), ಪಕ್ಷೇತರರಾಗಿ ಆನಂದ ಜಕಾತಿ, ಬ್ಲೂ ಇಂಡಿಯಾ ಪಕ್ಷದಿಂದ ತಳವಾರ ಶಿವಕುಮಾರ, ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಸೆ ನಾಮಪತ್ರ ಸಲ್ಲಿಸಿದರು.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ವೀರಣ್ಣ ಚರಂತಿಮಠ, ‘ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನರಿಗೆ ಆಕ್ರೋಶವಿದೆ. ಬಿಜೆಪಿ, ಹಿಂದುತ್ವಕ್ಕೆ ಗುಲುವಾಗಲಿದೆ’ ಎಂದರು.</p>.<p>ವೀರಣ್ಣ ಚರಂತಿಮಠ ಅವರು ದಶಕಗಳಿಂದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿದ್ದಾರೆ. ಬಾಗಲಕೋಟೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸೇರಿ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೂ ಅಧ್ಯಕ್ಷರಾಗಿದ್ದರು.</p>.<p>2004ರಲ್ಲಿ ಮೊದಲ ಬಾರಿಗೆ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. 2008 ಮತ್ತು 2018ರ ಚುನಾವಣೆಯಲ್ಲಿ ಗೆದ್ದಿದ್ದರು. 2013 ಮತ್ತು 2023ರ ಚುನಾವಣೆಯಲ್ಲಿ ಸೋತಿದ್ದರು.</p>.<p><strong>ಚರಂತಿಮಠರ ಚರ ಆಸ್ತಿ, ಸಾಲ ಹೆಚ್ಚಳ</strong></p><p>ವೀರಣ್ಣ ಚರಂತಿಮಠರ ಚರ ಆಸ್ತಿ ಹಾಗೂ ಸಾಲದಲ್ಲಿ ಹೆಚ್ಚಳವಾಗಿದೆ. 2023ರಲ್ಲಿ ಚರ ಆಸ್ತಿ ₹3.91 ಕೋಟಿ ಇದ್ದದ್ದು, 2026ರಲ್ಲಿ ₹7.91 ಕೋಟಿಗೆ ಹೆಚ್ಚಾಗಿದೆ. ಅದೇ ರೀತಿ ಕಳೆದ ಬಾರಿ ಕೇವಲ ₹59.40 ಲಕ್ಷ ಇದ್ದ ಸಾಲದ ಮೊತ್ತವು ₹4.65 ಕೋಟಿಗೆ ಹೆಚ್ಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ವೀರಣ್ಣ (ವೀರಭದ್ರಯ್ಯ) ಚರಂತಿಮಠ ಶುಕ್ರವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಗುರುವಾರ ವೀರಣ್ಣ ಅವರಿಗೆ ಟಿಕೆಟ್ ಘೋಷಿಸಿತ್ತು. ಪಕ್ಷದ ಮುಖಂಡರೊಂದಿಗೆ ಸೋಮವಾರ ಮೆರವಣಿಗೆಯಲ್ಲಿ ಬಂದು, ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು.</p>.<p>ಕಾಂಗ್ರೆಸ್ ನಿಂದ ಗೋವಿಂದರಾಜ ಬಳ್ಳಾರಿ (ಬಿ ಫಾರಂ ಸಲ್ಲಿಸಿಲ್ಲ), ಪಕ್ಷೇತರರಾಗಿ ಆನಂದ ಜಕಾತಿ, ಬ್ಲೂ ಇಂಡಿಯಾ ಪಕ್ಷದಿಂದ ತಳವಾರ ಶಿವಕುಮಾರ, ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಸೆ ನಾಮಪತ್ರ ಸಲ್ಲಿಸಿದರು.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ವೀರಣ್ಣ ಚರಂತಿಮಠ, ‘ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನರಿಗೆ ಆಕ್ರೋಶವಿದೆ. ಬಿಜೆಪಿ, ಹಿಂದುತ್ವಕ್ಕೆ ಗುಲುವಾಗಲಿದೆ’ ಎಂದರು.</p>.<p>ವೀರಣ್ಣ ಚರಂತಿಮಠ ಅವರು ದಶಕಗಳಿಂದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿದ್ದಾರೆ. ಬಾಗಲಕೋಟೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸೇರಿ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೂ ಅಧ್ಯಕ್ಷರಾಗಿದ್ದರು.</p>.<p>2004ರಲ್ಲಿ ಮೊದಲ ಬಾರಿಗೆ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. 2008 ಮತ್ತು 2018ರ ಚುನಾವಣೆಯಲ್ಲಿ ಗೆದ್ದಿದ್ದರು. 2013 ಮತ್ತು 2023ರ ಚುನಾವಣೆಯಲ್ಲಿ ಸೋತಿದ್ದರು.</p>.<p><strong>ಚರಂತಿಮಠರ ಚರ ಆಸ್ತಿ, ಸಾಲ ಹೆಚ್ಚಳ</strong></p><p>ವೀರಣ್ಣ ಚರಂತಿಮಠರ ಚರ ಆಸ್ತಿ ಹಾಗೂ ಸಾಲದಲ್ಲಿ ಹೆಚ್ಚಳವಾಗಿದೆ. 2023ರಲ್ಲಿ ಚರ ಆಸ್ತಿ ₹3.91 ಕೋಟಿ ಇದ್ದದ್ದು, 2026ರಲ್ಲಿ ₹7.91 ಕೋಟಿಗೆ ಹೆಚ್ಚಾಗಿದೆ. ಅದೇ ರೀತಿ ಕಳೆದ ಬಾರಿ ಕೇವಲ ₹59.40 ಲಕ್ಷ ಇದ್ದ ಸಾಲದ ಮೊತ್ತವು ₹4.65 ಕೋಟಿಗೆ ಹೆಚ್ಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>