ಈ ಸೇತುವೆ ಹುಬ್ಬಳ್ಳಿ–ಧಾರವಾಡ ಅವಳಿ ನಗರಕ್ಕೆ ಬಾಗಲಕೋಟೆ ಮಾತ್ರವಲ್ಲ ವಿಜಯಪುರ, ಯಾದಗಿರಿ, ಕಲಬುರ್ಗಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಭಾಗಕ್ಕೆ ಸಂಪರ್ಕ ಕೊಂಡಿಯಾಗಿದೆ. ಪ್ರವಾಹದ ನೀರು ಮೇಲೆ ಹರಿದ ಕಾರಣ ಕಳೆದೊಂದು ವಾರದಿಂದ ಈ ಸೇತುವೆ ಮೇಲೆ ಸಂಚಾರ ಬಂದ್ ಆಗಿತ್ತು. ವಾಹನಗಳು ಕೆರೂರು, ಕುಳಗೇರಿ ಕ್ರಾಸ್, ಬಾದಾಮಿ, ರೋಣ, ನರಗುಂದ, ನವಲಗುಂದ ಮಾರ್ಗವಾಗಿ ಹುಬ್ಬಳ್ಳಿ ತಲುಪುತ್ತಿದ್ದವು.