ನಗರದ ರೈಲ್ವೆ ನಿಲ್ದಾಣ, ನವನಗರ, ವಿದ್ಯಾಗಿರಿ ಭಾಗದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಆಹಾರ ವಿತರಣೆ ಮಾಡಿದರು. ರೋಗಿಗಳ ಜೊತೆ ಅವರ ಸಂಬಂಧಿಗಳು, ಆಸ್ಪತ್ರೆ ಸಿಬ್ಬಂದಿ ಹಾಗೂ ರೈಲು ನಿಲ್ದಾಣದ ಬಳಿ ಇದ್ದ ನಿರ್ಗತಿಕರು ಊಟ ಸವಿದರು. ಪುಲಾವ್, ಪಲ್ಯ, ಚಟ್ನಿ, ಮಜ್ಜಿಗೆ, ನೀರಿನ ಬಾಟಲ್ ವಿತರಣೆ ಮಾಡಿದರು. ಪೊಲೀಸರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಯಿತು.