ತಹಶೀಲ್ದಾರ್ ಸುಹಾಸ್ ಇಂಗಳೆ ಅವರಿಗೆ ಧಾರವಾಡಕ್ಕೆ ವರ್ಗಾವಣೆ ಆಗಿದೆ. ಇಒ ಭೀಮಪ್ಪ ಲಾಳಿ ಅವರಿಗೆ ಸ್ಥಾನ ತೋರಿಸಿಲ್ಲ. ಬಿಇಒ ಎ.ಎಸ್.ಹತ್ತಳ್ಳಿ, ಸಿಪಿಐ ಕೆ.ಎಸ್.ಹಟ್ಟಿ ಹಾಗೂ ಎಇಇ ಬಿ.ಎಂ.ಪೂಜಾರ ವರ್ಗಾವಣೆಗೊಂಡಿದ್ದಾರೆ. ಬಾದಾಮಿ ನೂತನ ತಹಶೀಲ್ದಾರ್ ಆಗಿ ಮಲ್ಲಿಕಾರ್ಜುನ ಹೆಗ್ಗಣ್ಣವರ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಸಿಪಿಐ ಆಗಿ ರಮೇಶ ಹಾನಾಪುರ, ಬಿಇಒ ಆಗಿ ಅಶೋಕ ಭಜಂತ್ರಿ, ಎಇಇ ಆಗಿ ಎಸ್.ವಿ. ಜಾಡರ ನೇಮಕಗೊಂಡಿದ್ದಾರೆ.