<p>ಬಾಗಲಕೋಟೆ: ಜಿಲ್ಲೆಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಸಾಧ್ಯವಾಗದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗಕ್ಕಾಗಿ ಉದ್ಯೋಗಿಗಳು ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಎದುರಾಗಿದೆ.</p>.<p>ಜನವರಿಯಿಂದಲೇ ಹೊಸ ಕಾಮಗಾರಿಗಳಿಗೆ ಅನುಮೋದನೆ ಸ್ಥಗಿತಗೊಂಡಿರುವುದರಿಂದ ದುಡಿಯುವ ಕೈಗಳಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಾ ಸಾಗಿವೆ. ಜಿಲ್ಲೆಗೆ 32 ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿತ್ತು. ಮಾರ್ಚ್ ಅಂತ್ಯದವರೆಗೆ 25.63 ಲಕ್ಷ ಮಾನವ ದಿನಗಳಷ್ಟೇ ಪೂರ್ಣಗೊಳಿಸಲಾಗಿದೆ.</p>.<p>ಗ್ರಾಮ ಪಂಚಾಯಿತಿಗಳಿಂದ ಈಗಾಗಲೇ ಕ್ರಿಯಾ ಯೋಜನೆಗಳನ್ನು ಸಿದ್ಧಗೊಳಿಸಿ, ಜಿಲ್ಲಾ ಪಂಚಾಯಿತಿಗೆ ಕಳುಹಿಸಿ ಕೊಡಲಾಗಿದೆ. ಅನುಮೋದನೆ ಮಾಡಬೇಕಾಗಿದ್ದ ಜಿಲ್ಲಾ ಪಂಚಾಯಿತಿಗೆ ಇನ್ನೂ ಲಾಗಿನ್ ಆಗಲು ಅವಕಾಶ ನೀಡದ್ದರಿಂದ ಕ್ರಿಯಾ ಯೋಜನೆಗಳೆಲ್ಲ ಅನುಮೋದನೆಗಾಗಿ ಕಾಯುತ್ತಿವೆ.</p>.<p>ಹೊಸ ಕ್ರಿಯಾ ಯೋಜನೆಯಡಿ ಕೆಲಸ ಮಾಡಲು ಸಾಧ್ಯವಾಗದ್ದರಿಂದ ಈಗಾಗಲೇ ನಡೆದಿರುವ ಕಾಮಗಾರಿಗಳಲ್ಲಿಯೇ ಉದ್ಯೋಗ ನೀಡಬೇಕಾಗಿದೆ. ಹಲವು ಪಂಚಾಯಿತಿಗಳಲ್ಲಿ ಆನ್ಗೋಯಿಂಗ್ ಕಾಮಗಾರಿಗಳಿಲ್ಲದ್ದರಿಂದ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ಕಾಮಗಾರಿಗಳು ಉಳಿದಿದ್ದರೂ, ಬೇಡಿಕೆಯಷ್ಟು ಉದ್ಯೋಗ ಪೂರೈಸಲು ಸಾಧ್ಯವಾಗುತ್ತಿಲ್ಲ.</p>.<p>ಜಿಲ್ಲೆಯಲ್ಲಿ 2.70 ಲಕ್ಷ ಜನರು ಜಾಬ್ ಕಾರ್ಡ್ ಹೊಂದಿದ್ದಾರೆ. ಅದರಲ್ಲಿ 1.60 ಲಕ್ಷ ಜನರು ಆ್ಯಕ್ಟಿವ್ ಆಗಿದ್ದಾರೆ. 2 ಸಾವಿರದಷ್ಟು ಜನರು ಮಾತ್ರ ಪೂರ್ತಿ 100 ದಿನಗಳ ಕಾಲ ಕೂಲಿ ಪಡೆದಿದ್ದಾರೆ. ಹುನಗುಂದ, ಇಳಕಲ್, ಬಾಗಲಕೋಟೆ, ಬಾದಾಮಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಮಖಂಡಿ, ಬೀಳಗಿ, ಮುಧೋಳ, ತೇರದಾಳ ಭಾಗದಲ್ಲಿ ಕಡಿಮೆ ಇದ್ದಾರೆ.</p>.<p>‘ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸ್ವೀಕರಿಸುತ್ತಿಲ್ಲ. ಬೇಸಿಗೆಯಾಗಿರುವುದರಿಂದ ಹೊಲಗಳಲ್ಲಿಯೂ ಹೆಚ್ಚಿನ ಕೆಲಸವಿರುವುದಿಲ್ಲ. ಜೊತೆಗೆ ಉದ್ಯೋಗ ಖಾತ್ರಿಯಡಿಯೂ ಕೆಲಸ ಸಿಗದ್ದರಿಂದ ಹಲವಾರು ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಗ್ರಾಕೂಸ್ ಮುಖಂಡ ಮಹಾಂತೇಶ ಹೊಸಮನಿ ದೂರಿದರು.</p>.<p>‘ಹುನಗುಂದ, ಇಳಕಲ್, ಬಾದಾಮಿ ಒಣಭೂಮಿ ಪ್ರದೇಶಗಳಾಗಿವೆ. ಕೈಗಾರಿಕೆಗಳು ಇಲ್ಲದಿರುವುದರಿಂದ ಇಲ್ಲಿಯೇ ಕೂಲಿ ಕಾರ್ಮಿಕ ಸಂಖ್ಯೆ ಹೆಚ್ಚಿದೆ. ಒಂದೇ ಬಾರಿಗೆ ನೂರಾರು ಸಂಖ್ಯಯಲ್ಲಿ ಅರ್ಜಿ ಸಲ್ಲಿಕೆಯಾಗುತ್ತವೆ. 10ಕ್ಕಿಂತ ಹೆಚ್ಚು ಕಾಮಗಾರಿಗಳಿಗೆ ಅವಕಾಶ ನೀಡದ್ದರಿಂದ ಹಲವರಿಗೆ ಕೆಲಸವೇ ಸಿಗುವುದಿಲ್ಲ’ ಎಂದು ಅವರು ದೂರುತ್ತಾರೆ.</p>.<p>‘ಉದ್ಯೋಗಕ್ಕಾಗಿ ಅರ್ಜಿ ತೆಗೆದುಕೊಳ್ಳಬೇಕು. ಹದಿನಾಲ್ಕು ದಿನಗಳಲ್ಲಿ ಕೆಲಸ ನೀಡದಿದ್ದರೆ, ಕೂಲಿ ನೀಡಬೇಕು ಎಂಬ ನಿಯಮವಿದೆ. ಆ ಪ್ರಕಾರ ಕೂಲಿ ನೀಡಬೇಕು’ ಎಂದು ಆಗ್ರಹಿಸಿದರು.</p>.<div><blockquote>ಉದ್ಯೋಗ ಖಾತ್ರಿ ಯೋಜನೆಯಡಿ ಮುಂದುವರೆದ ಕಾಮಗಾರಿಗಳಲ್ಲಿಯೇ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲಾಗುತ್ತಿದೆ</blockquote><span class="attribution"> ಶಶಿಧರ ಕುರೇರ, ಸಿಇಒ, ಜಿಲ್ಲಾ ಪಂಚಾಯಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ಜಿಲ್ಲೆಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಸಾಧ್ಯವಾಗದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗಕ್ಕಾಗಿ ಉದ್ಯೋಗಿಗಳು ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಎದುರಾಗಿದೆ.</p>.<p>ಜನವರಿಯಿಂದಲೇ ಹೊಸ ಕಾಮಗಾರಿಗಳಿಗೆ ಅನುಮೋದನೆ ಸ್ಥಗಿತಗೊಂಡಿರುವುದರಿಂದ ದುಡಿಯುವ ಕೈಗಳಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಾ ಸಾಗಿವೆ. ಜಿಲ್ಲೆಗೆ 32 ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿತ್ತು. ಮಾರ್ಚ್ ಅಂತ್ಯದವರೆಗೆ 25.63 ಲಕ್ಷ ಮಾನವ ದಿನಗಳಷ್ಟೇ ಪೂರ್ಣಗೊಳಿಸಲಾಗಿದೆ.</p>.<p>ಗ್ರಾಮ ಪಂಚಾಯಿತಿಗಳಿಂದ ಈಗಾಗಲೇ ಕ್ರಿಯಾ ಯೋಜನೆಗಳನ್ನು ಸಿದ್ಧಗೊಳಿಸಿ, ಜಿಲ್ಲಾ ಪಂಚಾಯಿತಿಗೆ ಕಳುಹಿಸಿ ಕೊಡಲಾಗಿದೆ. ಅನುಮೋದನೆ ಮಾಡಬೇಕಾಗಿದ್ದ ಜಿಲ್ಲಾ ಪಂಚಾಯಿತಿಗೆ ಇನ್ನೂ ಲಾಗಿನ್ ಆಗಲು ಅವಕಾಶ ನೀಡದ್ದರಿಂದ ಕ್ರಿಯಾ ಯೋಜನೆಗಳೆಲ್ಲ ಅನುಮೋದನೆಗಾಗಿ ಕಾಯುತ್ತಿವೆ.</p>.<p>ಹೊಸ ಕ್ರಿಯಾ ಯೋಜನೆಯಡಿ ಕೆಲಸ ಮಾಡಲು ಸಾಧ್ಯವಾಗದ್ದರಿಂದ ಈಗಾಗಲೇ ನಡೆದಿರುವ ಕಾಮಗಾರಿಗಳಲ್ಲಿಯೇ ಉದ್ಯೋಗ ನೀಡಬೇಕಾಗಿದೆ. ಹಲವು ಪಂಚಾಯಿತಿಗಳಲ್ಲಿ ಆನ್ಗೋಯಿಂಗ್ ಕಾಮಗಾರಿಗಳಿಲ್ಲದ್ದರಿಂದ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ಕಾಮಗಾರಿಗಳು ಉಳಿದಿದ್ದರೂ, ಬೇಡಿಕೆಯಷ್ಟು ಉದ್ಯೋಗ ಪೂರೈಸಲು ಸಾಧ್ಯವಾಗುತ್ತಿಲ್ಲ.</p>.<p>ಜಿಲ್ಲೆಯಲ್ಲಿ 2.70 ಲಕ್ಷ ಜನರು ಜಾಬ್ ಕಾರ್ಡ್ ಹೊಂದಿದ್ದಾರೆ. ಅದರಲ್ಲಿ 1.60 ಲಕ್ಷ ಜನರು ಆ್ಯಕ್ಟಿವ್ ಆಗಿದ್ದಾರೆ. 2 ಸಾವಿರದಷ್ಟು ಜನರು ಮಾತ್ರ ಪೂರ್ತಿ 100 ದಿನಗಳ ಕಾಲ ಕೂಲಿ ಪಡೆದಿದ್ದಾರೆ. ಹುನಗುಂದ, ಇಳಕಲ್, ಬಾಗಲಕೋಟೆ, ಬಾದಾಮಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಮಖಂಡಿ, ಬೀಳಗಿ, ಮುಧೋಳ, ತೇರದಾಳ ಭಾಗದಲ್ಲಿ ಕಡಿಮೆ ಇದ್ದಾರೆ.</p>.<p>‘ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸ್ವೀಕರಿಸುತ್ತಿಲ್ಲ. ಬೇಸಿಗೆಯಾಗಿರುವುದರಿಂದ ಹೊಲಗಳಲ್ಲಿಯೂ ಹೆಚ್ಚಿನ ಕೆಲಸವಿರುವುದಿಲ್ಲ. ಜೊತೆಗೆ ಉದ್ಯೋಗ ಖಾತ್ರಿಯಡಿಯೂ ಕೆಲಸ ಸಿಗದ್ದರಿಂದ ಹಲವಾರು ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಗ್ರಾಕೂಸ್ ಮುಖಂಡ ಮಹಾಂತೇಶ ಹೊಸಮನಿ ದೂರಿದರು.</p>.<p>‘ಹುನಗುಂದ, ಇಳಕಲ್, ಬಾದಾಮಿ ಒಣಭೂಮಿ ಪ್ರದೇಶಗಳಾಗಿವೆ. ಕೈಗಾರಿಕೆಗಳು ಇಲ್ಲದಿರುವುದರಿಂದ ಇಲ್ಲಿಯೇ ಕೂಲಿ ಕಾರ್ಮಿಕ ಸಂಖ್ಯೆ ಹೆಚ್ಚಿದೆ. ಒಂದೇ ಬಾರಿಗೆ ನೂರಾರು ಸಂಖ್ಯಯಲ್ಲಿ ಅರ್ಜಿ ಸಲ್ಲಿಕೆಯಾಗುತ್ತವೆ. 10ಕ್ಕಿಂತ ಹೆಚ್ಚು ಕಾಮಗಾರಿಗಳಿಗೆ ಅವಕಾಶ ನೀಡದ್ದರಿಂದ ಹಲವರಿಗೆ ಕೆಲಸವೇ ಸಿಗುವುದಿಲ್ಲ’ ಎಂದು ಅವರು ದೂರುತ್ತಾರೆ.</p>.<p>‘ಉದ್ಯೋಗಕ್ಕಾಗಿ ಅರ್ಜಿ ತೆಗೆದುಕೊಳ್ಳಬೇಕು. ಹದಿನಾಲ್ಕು ದಿನಗಳಲ್ಲಿ ಕೆಲಸ ನೀಡದಿದ್ದರೆ, ಕೂಲಿ ನೀಡಬೇಕು ಎಂಬ ನಿಯಮವಿದೆ. ಆ ಪ್ರಕಾರ ಕೂಲಿ ನೀಡಬೇಕು’ ಎಂದು ಆಗ್ರಹಿಸಿದರು.</p>.<div><blockquote>ಉದ್ಯೋಗ ಖಾತ್ರಿ ಯೋಜನೆಯಡಿ ಮುಂದುವರೆದ ಕಾಮಗಾರಿಗಳಲ್ಲಿಯೇ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲಾಗುತ್ತಿದೆ</blockquote><span class="attribution"> ಶಶಿಧರ ಕುರೇರ, ಸಿಇಒ, ಜಿಲ್ಲಾ ಪಂಚಾಯಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>