<p><strong>ಬಾಗಲಕೋಟೆ:</strong> ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮರಳು ಸಮಿತಿ ಸಭೆಗಳು ನಡೆಯುತ್ತವೆ. ಮರಳು ಅಕ್ರಮ ಗಣಿಗಾರಿಕೆ ತಡೆಯಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ಫೋರ್ಸ್ ಸಮಿತಿಯೂ ಇರುತ್ತದೆ. ಆದರೆ, ಮರಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಮಾತ್ರ ಬಿದ್ದಿಲ್ಲ. ಮರಳು ಅಕ್ರಮ ದಂಧೆಕೋರರಿಗೆ ಅಧಿಕಾರಿಗಳ ಭಯವಿಲ್ಲದಂತಾಗಿದೆ.</p>.<p>ಪ್ರತಿ ಮೂರು ತಿಂಗಳಿಗೊಮ್ಮೆ ಮರಳು ಸಮಿತಿಗಳ ಸಭೆ ನಡೆಸಬೇಕು ಎಂಬ ನಿಯಮವಿದೆ. ತಿಂಗಳು ಹೆಚ್ಚೂ, ಕಡಿಮೆಯಾದರೂ ಬಹುತೇಕ ತಾಲ್ಲೂಕುಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಸರ್ಕಾರದ ಸೂಚನೆಯಂತೆ ಸಭೆ ನಡೆಸಿದ ದಾಖಲೆಗಳ ಸೃಷ್ಟಿಯಾಗುತ್ತದೆಯೇ ಹೊರತು, ಪರಿಣಾಮಕಾರಿ ಚರ್ಚೆಯಾಗಿ, ಆ ವಿಷಯ ಅನುಷ್ಠಾನಕ್ಕೆ ಬರುವುದಿಲ್ಲ.</p>.<p>ಚೆನ್ನಾಗಿ ನೋಡಿಕೊಳ್ಳದವರ, ಹೊಸದಾಗಿ ಗಣಿಗಾರಿಕೆಗೆ ಕಾಲಿಟ್ಟವರ, ಪತ್ರಿಕೆಗಳಲ್ಲಿ ಸುದ್ದಿ ಬಂದಿದೆ ಎಂಬ ಕಾರಣಕ್ಕೆ ಅಲ್ಲೊಂದು, ಇಲ್ಲೊಂದು ದಾಳಿಗಳನ್ನು ನಡೆಸಲಾಗುತ್ತದೆ. ಒಂದು ಪಟ್ಟು ಅಕ್ರಮ ತಡೆದರೆ, ನೂರು ಪಟ್ಟಿನಷ್ಟು ಮರಳಿನ ಸಾಗಾಟ ನಡದೇ ಇರುತ್ತದೆ.</p>.<p>ರಕ್ಷಣೆ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಹುತೇಕ ಪ್ರದೇಶಗಳಲ್ಲಿ ಅವರ ಬೆನ್ನಿಗೆ ನಿಂತಿರುವ ಆರೋಪವನ್ನು ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಎದುರಿಸುತ್ತಿದ್ದಾರೆ.</p>.<p>ಮರಳು ಗಣಿಗಾರಿಕೆ ನಡೆಯುತ್ತಿರುವ ಕೆಲವು ಕಡೆಗಳಲ್ಲಿ ಜನಪ್ರತಿನಿಧಿಗಳು ಪಾಲುದಾರಿಕೆ ಹೊಂದಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಸಂಬಂಧಿಗಳ ಹೆಸರಿನಲ್ಲಿವೆ. ಹಿಂಬಾಲಕರಿಗೂ ಸಾಕಷ್ಟು ಕಡೆಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ತಮ್ಮ ರಾಜಕೀಯ ಚಟುವಟಿಕೆಗಳ ಖರ್ಚಿಗೆ ನೆರವಾಗುವವರ ಮರಳಿನ ವಾಹನಗಳನ್ನು ತಪಾಸಣೆ ಮಾಡದಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸೂಚಿಸುತ್ತಾರೆ.</p>.<p>ಜನಪ್ರತಿನಿಧಿಗಳ ಶಿಫಾರಿಸಿನ ಮೇರೆಗೆ ವರ್ಗವಾಗಿ ಬರುವ ಅಧಿಕಾರಿಗಳು, ಅವರ ಮಾತಿಗೆ ಮಣಿದು ಮರಳು ಅಕ್ರಮ ಗಣಿಗಾರಿಕೆ ಬಗ್ಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುತ್ತಾರೆ.</p>.<p>ಜನಪ್ರತಿನಿಧಿಗಳ ಸಖ್ಯ ಹೊಂದಿರುವ ಅಕ್ರಮ ಮರಳು ದಂಧೆಕೋರರು, ಒತ್ತಡ ಹಾಕಿಸುವುದರ ಜೊತೆಗೆ ಅಧಿಕಾರಿಗಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪರಿಣಾಮ ಅಧಿಕಾರಿಗಳ ತಂಡ ಗಣಿಗಾರಿಕೆ ನಡೆಯುವ ನದಿ, ಹಳ್ಳಗಳ ಕಡೆಗೆ ತಲೆ ಹಾಕಿಯೂ ಮಲಗುವುದಿಲ್ಲ. ಭೇಟಿ ನೀಡುವುದಾದರೂ, ಮೊದಲೇ ಮಾಹಿತಿ ನೀಡಿ ಹೋಗುವುದರಿಂದ ಅಕ್ರಮಗಳ ಪತ್ತೆಯಾಗುವುದಿಲ್ಲ.</p>.<p>ಬೇಡಿಕೆ ಹೆಚ್ಚು: ಮರಳು ಗಣಿಗಾರಿಕೆ ನಡೆಯುವ ಇಳಕಲ್, ಹುನಗುಂದ, ಬಾದಾಮಿ, ಜಮಖಂಡಿ, ಮುಧೋಳ ತಾಲ್ಲೂಕುಗಳ ಪೊಲೀಸ್ ಠಾಣೆ, ತಹಶೀಲ್ದಾರ್ ಹುದ್ದೆಗಳಿಗೆ ಇತರ ತಾಲ್ಲೂಕುಗಳಿಂದ ಹೆಚ್ಚಿನ ಬೇಡಿಕೆ ಹೆಚ್ಚಿದೆ.</p>.<p>ಅಕ್ರಮ ಮರಳು ಗಣಿಗಾರಿಕೆ ತಡೆಯದಿದ್ದರೆ ಸಾಕು ಅಕ್ರಮ ದಂಧೆಕೋರರು ಅಧಿಕಾರಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ದಾಳಿ ನಡೆಸಿಯಾರು ಹುಷಾರು ಎಂದು ಯಾರಾದರೂ ಎಚ್ಚರಿಸಿದರೆ, ‘ಅಧಿಕಾರಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಅವರಿಂದ ಯಾವುದೇ ಭಯವಿಲ್ಲ’ ಎಂದು ಹೇಳುವ ಮಟ್ಟಕ್ಕೆ ಬೆಳೆದಿದ್ದಾರೆ.</p>.<div><blockquote>ಅಧಿಕಾರಿಗಳ ತಂಡ ಸಕ್ರಿಯ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಮುಂದಿನ ಪೀಳಿಗೆಗೆ ಹಳ್ಳ, ನದಿಗಳು ಉಳಿಯುತ್ತವೆ</blockquote><span class="attribution">ನಾಗರಾಜ ಪಾಟೀಲ, ಸ್ಥಳೀಯ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮರಳು ಸಮಿತಿ ಸಭೆಗಳು ನಡೆಯುತ್ತವೆ. ಮರಳು ಅಕ್ರಮ ಗಣಿಗಾರಿಕೆ ತಡೆಯಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ಫೋರ್ಸ್ ಸಮಿತಿಯೂ ಇರುತ್ತದೆ. ಆದರೆ, ಮರಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಮಾತ್ರ ಬಿದ್ದಿಲ್ಲ. ಮರಳು ಅಕ್ರಮ ದಂಧೆಕೋರರಿಗೆ ಅಧಿಕಾರಿಗಳ ಭಯವಿಲ್ಲದಂತಾಗಿದೆ.</p>.<p>ಪ್ರತಿ ಮೂರು ತಿಂಗಳಿಗೊಮ್ಮೆ ಮರಳು ಸಮಿತಿಗಳ ಸಭೆ ನಡೆಸಬೇಕು ಎಂಬ ನಿಯಮವಿದೆ. ತಿಂಗಳು ಹೆಚ್ಚೂ, ಕಡಿಮೆಯಾದರೂ ಬಹುತೇಕ ತಾಲ್ಲೂಕುಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಸರ್ಕಾರದ ಸೂಚನೆಯಂತೆ ಸಭೆ ನಡೆಸಿದ ದಾಖಲೆಗಳ ಸೃಷ್ಟಿಯಾಗುತ್ತದೆಯೇ ಹೊರತು, ಪರಿಣಾಮಕಾರಿ ಚರ್ಚೆಯಾಗಿ, ಆ ವಿಷಯ ಅನುಷ್ಠಾನಕ್ಕೆ ಬರುವುದಿಲ್ಲ.</p>.<p>ಚೆನ್ನಾಗಿ ನೋಡಿಕೊಳ್ಳದವರ, ಹೊಸದಾಗಿ ಗಣಿಗಾರಿಕೆಗೆ ಕಾಲಿಟ್ಟವರ, ಪತ್ರಿಕೆಗಳಲ್ಲಿ ಸುದ್ದಿ ಬಂದಿದೆ ಎಂಬ ಕಾರಣಕ್ಕೆ ಅಲ್ಲೊಂದು, ಇಲ್ಲೊಂದು ದಾಳಿಗಳನ್ನು ನಡೆಸಲಾಗುತ್ತದೆ. ಒಂದು ಪಟ್ಟು ಅಕ್ರಮ ತಡೆದರೆ, ನೂರು ಪಟ್ಟಿನಷ್ಟು ಮರಳಿನ ಸಾಗಾಟ ನಡದೇ ಇರುತ್ತದೆ.</p>.<p>ರಕ್ಷಣೆ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಹುತೇಕ ಪ್ರದೇಶಗಳಲ್ಲಿ ಅವರ ಬೆನ್ನಿಗೆ ನಿಂತಿರುವ ಆರೋಪವನ್ನು ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಎದುರಿಸುತ್ತಿದ್ದಾರೆ.</p>.<p>ಮರಳು ಗಣಿಗಾರಿಕೆ ನಡೆಯುತ್ತಿರುವ ಕೆಲವು ಕಡೆಗಳಲ್ಲಿ ಜನಪ್ರತಿನಿಧಿಗಳು ಪಾಲುದಾರಿಕೆ ಹೊಂದಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಸಂಬಂಧಿಗಳ ಹೆಸರಿನಲ್ಲಿವೆ. ಹಿಂಬಾಲಕರಿಗೂ ಸಾಕಷ್ಟು ಕಡೆಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ತಮ್ಮ ರಾಜಕೀಯ ಚಟುವಟಿಕೆಗಳ ಖರ್ಚಿಗೆ ನೆರವಾಗುವವರ ಮರಳಿನ ವಾಹನಗಳನ್ನು ತಪಾಸಣೆ ಮಾಡದಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸೂಚಿಸುತ್ತಾರೆ.</p>.<p>ಜನಪ್ರತಿನಿಧಿಗಳ ಶಿಫಾರಿಸಿನ ಮೇರೆಗೆ ವರ್ಗವಾಗಿ ಬರುವ ಅಧಿಕಾರಿಗಳು, ಅವರ ಮಾತಿಗೆ ಮಣಿದು ಮರಳು ಅಕ್ರಮ ಗಣಿಗಾರಿಕೆ ಬಗ್ಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುತ್ತಾರೆ.</p>.<p>ಜನಪ್ರತಿನಿಧಿಗಳ ಸಖ್ಯ ಹೊಂದಿರುವ ಅಕ್ರಮ ಮರಳು ದಂಧೆಕೋರರು, ಒತ್ತಡ ಹಾಕಿಸುವುದರ ಜೊತೆಗೆ ಅಧಿಕಾರಿಗಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪರಿಣಾಮ ಅಧಿಕಾರಿಗಳ ತಂಡ ಗಣಿಗಾರಿಕೆ ನಡೆಯುವ ನದಿ, ಹಳ್ಳಗಳ ಕಡೆಗೆ ತಲೆ ಹಾಕಿಯೂ ಮಲಗುವುದಿಲ್ಲ. ಭೇಟಿ ನೀಡುವುದಾದರೂ, ಮೊದಲೇ ಮಾಹಿತಿ ನೀಡಿ ಹೋಗುವುದರಿಂದ ಅಕ್ರಮಗಳ ಪತ್ತೆಯಾಗುವುದಿಲ್ಲ.</p>.<p>ಬೇಡಿಕೆ ಹೆಚ್ಚು: ಮರಳು ಗಣಿಗಾರಿಕೆ ನಡೆಯುವ ಇಳಕಲ್, ಹುನಗುಂದ, ಬಾದಾಮಿ, ಜಮಖಂಡಿ, ಮುಧೋಳ ತಾಲ್ಲೂಕುಗಳ ಪೊಲೀಸ್ ಠಾಣೆ, ತಹಶೀಲ್ದಾರ್ ಹುದ್ದೆಗಳಿಗೆ ಇತರ ತಾಲ್ಲೂಕುಗಳಿಂದ ಹೆಚ್ಚಿನ ಬೇಡಿಕೆ ಹೆಚ್ಚಿದೆ.</p>.<p>ಅಕ್ರಮ ಮರಳು ಗಣಿಗಾರಿಕೆ ತಡೆಯದಿದ್ದರೆ ಸಾಕು ಅಕ್ರಮ ದಂಧೆಕೋರರು ಅಧಿಕಾರಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ದಾಳಿ ನಡೆಸಿಯಾರು ಹುಷಾರು ಎಂದು ಯಾರಾದರೂ ಎಚ್ಚರಿಸಿದರೆ, ‘ಅಧಿಕಾರಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಅವರಿಂದ ಯಾವುದೇ ಭಯವಿಲ್ಲ’ ಎಂದು ಹೇಳುವ ಮಟ್ಟಕ್ಕೆ ಬೆಳೆದಿದ್ದಾರೆ.</p>.<div><blockquote>ಅಧಿಕಾರಿಗಳ ತಂಡ ಸಕ್ರಿಯ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಮುಂದಿನ ಪೀಳಿಗೆಗೆ ಹಳ್ಳ, ನದಿಗಳು ಉಳಿಯುತ್ತವೆ</blockquote><span class="attribution">ನಾಗರಾಜ ಪಾಟೀಲ, ಸ್ಥಳೀಯ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>