<p><strong>ಬಾಗಲಕೋಟೆ:</strong> ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ವಿಷಯ ಆಗಾಗ ಚರ್ಚೆಗೆ ಬರುತ್ತದೆ. ನಂತರ ಹಿನ್ನಲೆಗೆ ಸರಿಯುತ್ತದೆ. ಒಂದೆರಡು ಕಡೆ ದಾಳಿಯೂ ನಡೆಯುತ್ತದೆ. ಆದರೆ, ಕಡಿವಾಣ ಮಾತ್ರ ಬಿದ್ದಿಲ್ಲ.</p>.<p>ಪತ್ರಿಕೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸುದ್ದಿಗಳು ಪ್ರಕಟವಾ ದಾಗ ಒಂದೆರಡು ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮ ಮರಳು ಹಿಡಿಯಲಾಗುತ್ತದೆ. ವಾಹನಗಳನ್ನೂ ಜಪ್ತಿ ಮಾಡಲಾಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವುದಕ್ಕೂ ಮುನ್ನ ಏನು ಮಾಡುತ್ತಿರುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.</p>.<p>ಬಹುತೇಕ ನಗರ ಪ್ರದೇಶ, ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಳಿ ಪ್ರದೇಶಗಳಲ್ಲಿಯೂ ಅಂಗಡಿಗಳವರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದ ಸವಾರರು ಕಾಣುತ್ತಾರೆ, ಆದರೆ, ಮರಳಿನ ಲಾರಿ, ಟಿಪ್ಪರ್ಗಳು ಕಾಣುವುದಿಲ್ಲವೇ?</p>.<p>ಅಕ್ರಮ ಮರಳು ಸಾಗಾಟ ತಡೆಯಲು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಆದರೆ, ಆ ಚೆಕ್ ಪೋಸ್ಟ್ಗಳು ಕಾಟಾಚಾರ ಎಂಬಂತೆ ಕಾರ್ಯ ನಿರ್ವಹಿಸುವುದರಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಲೇ ಇದೆ.</p>.<p><strong>ಮರಳಿನ ಅಡ್ಡೆಗಳಿಗೆ ಭೇಟಿ ನೀಡಿದ್ದೀರಾ?:</strong> ಬಹುತೇಕ ಅಧಿಕಾರಿಗಳು ಮರಳಿನ ಲೈಸನ್ಸ್ ನೀಡಿರುವ ಸ್ಥಳಗಳಿಗೆ ಭೇಟಿ ನೀಡುವುದೇ ಇಲ್ಲ. ಲೈಸನ್ಸ್ ನೀಡುವಾಗ ಇಂತಿಷ್ಟು ಪ್ರದೇಶದಲ್ಲಿ, ಇಂತಿಷ್ಟು ಪ್ರಮಾಣದ ಮರಳು ಬರಬಹುದು ಎಂದು ಅಂದಾಜಿಸಿ ನೀಡಲಾಗಿರುತ್ತದೆ.</p>.<p>ನಂತರದಲ್ಲಿ ಎಷ್ಟು ಪ್ರದೇಶದಲ್ಲಿ ತೆಗೆಯಲಾಗಿದೆ, ಎಷ್ಟು ಪ್ರಮಾಣದ ಮರಳು ತೆಗೆಯಲಾಗಿದೆ ಎಂಬ ಪರಿಶೀಲನೆಯೇ ನಡೆಯುವುದಿಲ್ಲ.</p>.<p>ಮರಳು ಗಣಿಗಾರಿಕೆಗೆ ಲೈಸನ್ಸ್ ಪಡೆದಿದ್ದ ಹಲವು ಸ್ಥಳಗಳಲ್ಲಿ ಮರಳು ಮುಗಿದು ಹೋಗಿದೆ. ಆದರೂ, ಅದೇ ಲೈಸನ್ಸ್ನಡಿ ಪಾಸ್ ಪಡೆದು ಬೇರೆ ಕಡೆಯ ಅಕ್ರಮವಾಗಿ ಮರಳನ್ನು ತೆಗೆದು, ಅದೇ ಪಾಸ್ ಮೂಲಕ ಸಾಗಿಸಲಾಗುತ್ತದೆ.</p>.<p><strong>ಕಚೇರಿಯಲ್ಲಿ ಸಮಿತಿಗಳ ಪರಿಶೀಲನೆ:</strong> ಜಿಲ್ಲಾ ಮರಳು ಸಮಿತಿ ಹಾಗೂ ತಾಲ್ಲೂಕು ಮರಳು ಸಮಿತಿಯ ಸಭೆಗಳು ಆಗಾಗ ನಡೆಯುತ್ತೇವೆ. ಆದರೆ, ಸಮಿತಿ ಎಂದೂ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವುದಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಒಪ್ಪಿಸುವ ವರದಿಯನ್ನೇ ನೆಚ್ಚಿಕೊಳ್ಳುತ್ತಿರುವುದರಿಂದ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ.</p>.<div><blockquote>ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ</blockquote><span class="attribution">ಸಂಗಪ್ಪ, ಜಿಲ್ಲಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ವಿಷಯ ಆಗಾಗ ಚರ್ಚೆಗೆ ಬರುತ್ತದೆ. ನಂತರ ಹಿನ್ನಲೆಗೆ ಸರಿಯುತ್ತದೆ. ಒಂದೆರಡು ಕಡೆ ದಾಳಿಯೂ ನಡೆಯುತ್ತದೆ. ಆದರೆ, ಕಡಿವಾಣ ಮಾತ್ರ ಬಿದ್ದಿಲ್ಲ.</p>.<p>ಪತ್ರಿಕೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸುದ್ದಿಗಳು ಪ್ರಕಟವಾ ದಾಗ ಒಂದೆರಡು ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮ ಮರಳು ಹಿಡಿಯಲಾಗುತ್ತದೆ. ವಾಹನಗಳನ್ನೂ ಜಪ್ತಿ ಮಾಡಲಾಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವುದಕ್ಕೂ ಮುನ್ನ ಏನು ಮಾಡುತ್ತಿರುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.</p>.<p>ಬಹುತೇಕ ನಗರ ಪ್ರದೇಶ, ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಳಿ ಪ್ರದೇಶಗಳಲ್ಲಿಯೂ ಅಂಗಡಿಗಳವರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದ ಸವಾರರು ಕಾಣುತ್ತಾರೆ, ಆದರೆ, ಮರಳಿನ ಲಾರಿ, ಟಿಪ್ಪರ್ಗಳು ಕಾಣುವುದಿಲ್ಲವೇ?</p>.<p>ಅಕ್ರಮ ಮರಳು ಸಾಗಾಟ ತಡೆಯಲು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಆದರೆ, ಆ ಚೆಕ್ ಪೋಸ್ಟ್ಗಳು ಕಾಟಾಚಾರ ಎಂಬಂತೆ ಕಾರ್ಯ ನಿರ್ವಹಿಸುವುದರಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಲೇ ಇದೆ.</p>.<p><strong>ಮರಳಿನ ಅಡ್ಡೆಗಳಿಗೆ ಭೇಟಿ ನೀಡಿದ್ದೀರಾ?:</strong> ಬಹುತೇಕ ಅಧಿಕಾರಿಗಳು ಮರಳಿನ ಲೈಸನ್ಸ್ ನೀಡಿರುವ ಸ್ಥಳಗಳಿಗೆ ಭೇಟಿ ನೀಡುವುದೇ ಇಲ್ಲ. ಲೈಸನ್ಸ್ ನೀಡುವಾಗ ಇಂತಿಷ್ಟು ಪ್ರದೇಶದಲ್ಲಿ, ಇಂತಿಷ್ಟು ಪ್ರಮಾಣದ ಮರಳು ಬರಬಹುದು ಎಂದು ಅಂದಾಜಿಸಿ ನೀಡಲಾಗಿರುತ್ತದೆ.</p>.<p>ನಂತರದಲ್ಲಿ ಎಷ್ಟು ಪ್ರದೇಶದಲ್ಲಿ ತೆಗೆಯಲಾಗಿದೆ, ಎಷ್ಟು ಪ್ರಮಾಣದ ಮರಳು ತೆಗೆಯಲಾಗಿದೆ ಎಂಬ ಪರಿಶೀಲನೆಯೇ ನಡೆಯುವುದಿಲ್ಲ.</p>.<p>ಮರಳು ಗಣಿಗಾರಿಕೆಗೆ ಲೈಸನ್ಸ್ ಪಡೆದಿದ್ದ ಹಲವು ಸ್ಥಳಗಳಲ್ಲಿ ಮರಳು ಮುಗಿದು ಹೋಗಿದೆ. ಆದರೂ, ಅದೇ ಲೈಸನ್ಸ್ನಡಿ ಪಾಸ್ ಪಡೆದು ಬೇರೆ ಕಡೆಯ ಅಕ್ರಮವಾಗಿ ಮರಳನ್ನು ತೆಗೆದು, ಅದೇ ಪಾಸ್ ಮೂಲಕ ಸಾಗಿಸಲಾಗುತ್ತದೆ.</p>.<p><strong>ಕಚೇರಿಯಲ್ಲಿ ಸಮಿತಿಗಳ ಪರಿಶೀಲನೆ:</strong> ಜಿಲ್ಲಾ ಮರಳು ಸಮಿತಿ ಹಾಗೂ ತಾಲ್ಲೂಕು ಮರಳು ಸಮಿತಿಯ ಸಭೆಗಳು ಆಗಾಗ ನಡೆಯುತ್ತೇವೆ. ಆದರೆ, ಸಮಿತಿ ಎಂದೂ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವುದಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಒಪ್ಪಿಸುವ ವರದಿಯನ್ನೇ ನೆಚ್ಚಿಕೊಳ್ಳುತ್ತಿರುವುದರಿಂದ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ.</p>.<div><blockquote>ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ</blockquote><span class="attribution">ಸಂಗಪ್ಪ, ಜಿಲ್ಲಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>