<p><strong>ಬಾಗಲಕೋಟೆ:</strong> ಕೋಟಿ, ಕೋಟಿ ಸುರಿದರೂ ಮುಚಖಂಡಿ ಕೆರೆಯಲ್ಲಿ ಒಂದು ಹನಿ ನೀರಿಲ್ಲ. ಅವೈಜ್ಞಾನಿಕಕಾಮಗಾರಿ, ವಿಳಂಬ ನೀತಿಯಿಂದಾಗಿ ನೀರಿಲ್ಲದೇ ಕೆರೆ, ಖಾಲಿ ಖಾಲಿಯಾಗಿದೆ.</p>.<p>1882ರಲ್ಲಿ ದೂರದೃಷ್ಟಿ ಇಟ್ಟುಕೊಂಡು 720 ಎಕರೆ ಪ್ರದೇಶದಲ್ಲಿ ಬ್ರಿಟಿಷರು ಕೆರೆ ನಿರ್ಮಿಸಿದ್ದಾರೆ. ಕೆರೆ ನಿರ್ಮಿಸಿರುವ ಕಲ್ಲಿನ ಗೋಡೆ ಇಂದಿಗೂ ಗಟ್ಟಿ ಮುಟ್ಟಾಗಿದೆ. 144 ವರ್ಷಗಳು ಕಳೆದರೂ ಸುಭದ್ರವಾಗಿದೆ. ನೀರು ಹರಿದು ಬರುವ ಮೂಲಗಳು ಬಂದ್ ಆಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಕೆರೆ ತುಂಬುತ್ತಿಲ್ಲ.</p>.<p>ಘಟಪ್ರಭಾ ನದಿಯಿಂದ ಕೆರೆ ತುಂಬಿಸಲು ಕೆಲ ವರ್ಷಗಳ ಹಿಂದೆ ₹12 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಕಾಮಗಾರಿ ಮಾಡಲಾಗಿತ್ತು. ಪಂಪ್ನಿಂದ ನೀರು ಹರಿಸಲಾಯಿತಾದರೂ ರಾವಣ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಯಿತು.</p>.<p>ಘಟಪ್ರಭಾ ನದಿಯಲ್ಲಿ ಹಿನ್ನೀರು ನಿಂತಿರುವಾಗಲೇ ಕೆರೆ ನೀರನ್ನು ಲಿಫ್ಟ್ ಮಾಡಬೇಕು. ನೀರು ಲಿಫ್ಟ್ ಮಾಡುವ ಪೈಪ್ ಸಣ್ಣದಾಗಿದ್ದರಿಂದ ಕೆರೆ ತುಂಬುತ್ತಿಲ್ಲ ಎಂದು ಹೊಸದೊಂದು ಯೋಜನೆ ರೂಪಿಸಲಾಯಿತು.</p>.<p>2023ರಲ್ಲಿ ₹40 ಕೋಟಿಗೂ ಹೆಚ್ಚು ವೆಚ್ಚದಲ್ಲಿ ದೊಡ್ಡದಾದ ಪೈಪ್ಗಳನ್ನು ಅಳವಡಿಸಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಕಾಮಗಾರಿ ಕುಂಟುತ್ತಾ ಸಾಗಿದ್ದು, ಇಂದಿಗೂ ಪೂರ್ಣಗೊಂಡಿಲ್ಲ. ಪರಿಣಾಮ ಕೆರೆ ನೀರಿಲ್ಲದೇ ಖಾಲಿ, ಖಾಲಿಯಾಗಿದೆ.</p>.<p>ಬಾಗಲಕೋಟೆಗೆ ಹೊಂದಿಕೊಂಡಿರುವ ಕೆರೆ ಭರ್ತಿಯಾದರೆ ಬಾಗಲಕೋಟೆ ಸೇರಿದಂತೆ ಹತ್ತಾರು ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದ ಕೆರೆ ಭರ್ತಿಯಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-19-1724411789</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಕೋಟಿ, ಕೋಟಿ ಸುರಿದರೂ ಮುಚಖಂಡಿ ಕೆರೆಯಲ್ಲಿ ಒಂದು ಹನಿ ನೀರಿಲ್ಲ. ಅವೈಜ್ಞಾನಿಕಕಾಮಗಾರಿ, ವಿಳಂಬ ನೀತಿಯಿಂದಾಗಿ ನೀರಿಲ್ಲದೇ ಕೆರೆ, ಖಾಲಿ ಖಾಲಿಯಾಗಿದೆ.</p>.<p>1882ರಲ್ಲಿ ದೂರದೃಷ್ಟಿ ಇಟ್ಟುಕೊಂಡು 720 ಎಕರೆ ಪ್ರದೇಶದಲ್ಲಿ ಬ್ರಿಟಿಷರು ಕೆರೆ ನಿರ್ಮಿಸಿದ್ದಾರೆ. ಕೆರೆ ನಿರ್ಮಿಸಿರುವ ಕಲ್ಲಿನ ಗೋಡೆ ಇಂದಿಗೂ ಗಟ್ಟಿ ಮುಟ್ಟಾಗಿದೆ. 144 ವರ್ಷಗಳು ಕಳೆದರೂ ಸುಭದ್ರವಾಗಿದೆ. ನೀರು ಹರಿದು ಬರುವ ಮೂಲಗಳು ಬಂದ್ ಆಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಕೆರೆ ತುಂಬುತ್ತಿಲ್ಲ.</p>.<p>ಘಟಪ್ರಭಾ ನದಿಯಿಂದ ಕೆರೆ ತುಂಬಿಸಲು ಕೆಲ ವರ್ಷಗಳ ಹಿಂದೆ ₹12 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಕಾಮಗಾರಿ ಮಾಡಲಾಗಿತ್ತು. ಪಂಪ್ನಿಂದ ನೀರು ಹರಿಸಲಾಯಿತಾದರೂ ರಾವಣ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಯಿತು.</p>.<p>ಘಟಪ್ರಭಾ ನದಿಯಲ್ಲಿ ಹಿನ್ನೀರು ನಿಂತಿರುವಾಗಲೇ ಕೆರೆ ನೀರನ್ನು ಲಿಫ್ಟ್ ಮಾಡಬೇಕು. ನೀರು ಲಿಫ್ಟ್ ಮಾಡುವ ಪೈಪ್ ಸಣ್ಣದಾಗಿದ್ದರಿಂದ ಕೆರೆ ತುಂಬುತ್ತಿಲ್ಲ ಎಂದು ಹೊಸದೊಂದು ಯೋಜನೆ ರೂಪಿಸಲಾಯಿತು.</p>.<p>2023ರಲ್ಲಿ ₹40 ಕೋಟಿಗೂ ಹೆಚ್ಚು ವೆಚ್ಚದಲ್ಲಿ ದೊಡ್ಡದಾದ ಪೈಪ್ಗಳನ್ನು ಅಳವಡಿಸಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಕಾಮಗಾರಿ ಕುಂಟುತ್ತಾ ಸಾಗಿದ್ದು, ಇಂದಿಗೂ ಪೂರ್ಣಗೊಂಡಿಲ್ಲ. ಪರಿಣಾಮ ಕೆರೆ ನೀರಿಲ್ಲದೇ ಖಾಲಿ, ಖಾಲಿಯಾಗಿದೆ.</p>.<p>ಬಾಗಲಕೋಟೆಗೆ ಹೊಂದಿಕೊಂಡಿರುವ ಕೆರೆ ಭರ್ತಿಯಾದರೆ ಬಾಗಲಕೋಟೆ ಸೇರಿದಂತೆ ಹತ್ತಾರು ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದ ಕೆರೆ ಭರ್ತಿಯಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-19-1724411789</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>