<p><strong>ಬಾಗಲಕೋಟೆ:</strong> ನವನಗರ ಮೂರನೇ ಯುನಿಟ್ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಅವಧಿ ಪೂರ್ಣಗೊಂಡಿದೆ. ಆದರೆ, ಕಾಮಗಾರಿ ಮಾತ್ರ ಪೂರ್ಣಗೊಂ ಡಿಲ್ಲ. ಇನ್ನೂ ನಾಲ್ಕಾರು ತಿಂಗಳಾ ದರೂ ಮುಗಿಯುವ ಲಕ್ಷಣಗಳಿಲ್ಲ.</p>.<p>ನವನಗರದ ಮೂರನೇ ಯುನಿಟ್ ಅಭಿವೃದ್ಧಿ ಕಾಮಗಾರಿಯನ್ನು 2023ರ ಮಾರ್ಚ್ನಲ್ಲಿ ಕಾಮಗಾರಿ ಆರಂಭ ಗೊಂಡಿದೆ. 2025ರ ಸೆಪ್ಟೆಂಬರ್ ತಿಂಗಳಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅವಧಿ ಮುಗಿದು ಏಳು ತಿಂಗಳಾದರೂ ಕಾಮಗಾರಿ ನಡದೇ ಇದೆ.</p>.<p>₹2,317 ಕೋಟಿ ವೆಚ್ಚದಲ್ಲಿ 1,871 (121 ಪ್ರೈವೇಟ್ ಲ್ಯಾಂಡ್ ಸೇರಿ) ಎಕರೆ ಅಭಿವೃದ್ಧಿ ಕಾಮಗಾರಿಯನ್ನು ಐದು ಪ್ಯಾಕೇಜ್ಗಳಲ್ಲಿ ನೀಡಲಾಗಿದೆ. ಸ್ಟಾರ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಗೆ ನಾಲ್ಕು ಪ್ಯಾಕೇಜ್ ನೀಡಿದ್ದರೆ, ಬಿಎಸ್ ಆರ್ ಕಂಪನಿಗೆ ಒಂದು ಪ್ಯಾಕೇಜ್ ನೀಡಲಾ ಗಿದೆ.</p>.<p>ಕೆಲವು ಕಡೆಗಳಲ್ಲಿ ಈಗಾಗಲೇ ಒಳಚರಂಡಿ, ಗಟಾರ, ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಗಟಾರ ನಿರ್ಮಾಣ ಕಾರ್ಯ ನಡೆದಿದೆ. ಬಹುತೇಕ ಕಡೆಗಳಲ್ಲಿ ಇನ್ನೂ ರಸ್ತೆ ನಿರ್ಮಾಣ ಕಾರ್ಯವಾಗಿಲ್ಲ. ರಸ್ತೆ ಕಾಮಗಾರಿ ಇನ್ನೇನು ಆರಂಭವಾಗುವ ಹೊತ್ತಿಗೆ ಮಳೆಗಾಲ ಆರಂಭವಾಗುವುದರಿಂದ ಇನ್ನೂ ಮೂರ್ನಾಲ್ಕು ತಿಂಗಳು ಕಾಮಗಾರಿ ನಡೆಯುವುದಿಲ್ಲ.</p>.<p>ಸೆಪ್ಟೆಂಬರ್ನಲ್ಲಿ ಕಾಮಗಾರಿ ಮುಗಿಯದ್ದರಿಂದ 2026ರ ಮಾರ್ಚ್ ವರೆಗೆ ಕಾಮಗಾರಿ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಮಾರ್ಚ್ ಸಹ ಪೂರ್ಣ ಗೊಂಡಿದೆ. ಮತ್ತೇ ಕಾಮಗಾರಿ ಅವಧಿ ವಿಸ್ತರಿಸಬೇಕಾಗಿದೆ.</p>.<p>ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ. ಎಷ್ಟು ಅನುದಾನ ಬಿಡುಗಡೆಯಾಗಬೇಕಿದೆ. ಕಾಮಗಾರಿ ವಿಳಂಬಕ್ಕೆ ಕಾರಣಗಳೇನು ಎಂಬ ಮಾಹಿತಿಯನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿದರೆ, ಒಬ್ಬ ಅಧಿಕಾರಿ ಇನ್ನೊಬ್ಬ ಅಧಿಕಾರಿಯತ್ತ ತೋರಿಸುತ್ತಾನೆ.</p>.<p>ಪ್ರಾಧಿಕಾರಕ್ಕೆ ಹೊಸದಾಗಿ ಪ್ರಕಾಶ ತಪಶೆಟ್ಟಿ ಅವರನ್ನು ಅಧ್ಯಕ್ಷರ ನ್ನಾಗಿ ನೇಮಕ ಮಾಡಲಾಗಿದೆ. ಅವರೂ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ಎಚ್.ವೈ. ಮೇಟಿ ಅವರ ನಿಧನದ ನಂತರ ಬಿಟಿಡಿಎ ಆಡಳಿತ ಹಳಿ ತಪ್ಪಿದೆ.</p>.<p>ಅದನ್ನು ಸರಿದಾರಿಗೆ ತರುವ ಕೆಲಸ ಹೊಸ ಅಧ್ಯಕ್ಷರಿಂದ ಆಗಬೇಕಿದೆ.</p>.<p>ಮುಳುಗಡೆ ಸಂತ್ರಸ್ತರು ಹಕ್ಕು ಪತ್ರ ಪಡೆಯಲು ನಿತ್ಯ ಬಿಟಿಡಿಎ ಕಚೇರಿಗೆ ಅಲೆದಾಡುತ್ತಿದ್ದಾರೆ. ಒಂದೇ ಬಾರಿಗೆ ನೀಡಬಹುದಾಗಿದ್ದ ಹಕ್ಕುಪತ್ರಗಳನ್ನು ಹತ್ತಾರು ವರ್ಷದಿಂದ ನೀಡುವ ಕಾರ್ಯ ನಡೆದೇ ಇದೆ. ಮಧ್ಯವರ್ತಿಗಳಲ್ಲಿದೇ ಹಕ್ಕುಪತ್ರ ಪಡೆಯುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<div><blockquote>ಬಿಟಿಡಿಎಗೆ ಕಾಯಕಲ್ಪ ನೀಡುವ ಕಾರ್ಯ ಮಾಡಲಾಗುವುದು. ಸಂತ್ರಸ್ತರಿಗೇ ನೇರವಾಗಿ ಹಕ್ಕುಪತ್ರ ದೊರೆಯುವಂತೆ ಮಾಡಲಾಗುವುದು. </blockquote><span class="attribution"> ಪ್ರಕಾಶ ತಪಶೆಟ್ಟಿ, ಬಿಟಿಡಿಎ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ನವನಗರ ಮೂರನೇ ಯುನಿಟ್ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಅವಧಿ ಪೂರ್ಣಗೊಂಡಿದೆ. ಆದರೆ, ಕಾಮಗಾರಿ ಮಾತ್ರ ಪೂರ್ಣಗೊಂ ಡಿಲ್ಲ. ಇನ್ನೂ ನಾಲ್ಕಾರು ತಿಂಗಳಾ ದರೂ ಮುಗಿಯುವ ಲಕ್ಷಣಗಳಿಲ್ಲ.</p>.<p>ನವನಗರದ ಮೂರನೇ ಯುನಿಟ್ ಅಭಿವೃದ್ಧಿ ಕಾಮಗಾರಿಯನ್ನು 2023ರ ಮಾರ್ಚ್ನಲ್ಲಿ ಕಾಮಗಾರಿ ಆರಂಭ ಗೊಂಡಿದೆ. 2025ರ ಸೆಪ್ಟೆಂಬರ್ ತಿಂಗಳಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅವಧಿ ಮುಗಿದು ಏಳು ತಿಂಗಳಾದರೂ ಕಾಮಗಾರಿ ನಡದೇ ಇದೆ.</p>.<p>₹2,317 ಕೋಟಿ ವೆಚ್ಚದಲ್ಲಿ 1,871 (121 ಪ್ರೈವೇಟ್ ಲ್ಯಾಂಡ್ ಸೇರಿ) ಎಕರೆ ಅಭಿವೃದ್ಧಿ ಕಾಮಗಾರಿಯನ್ನು ಐದು ಪ್ಯಾಕೇಜ್ಗಳಲ್ಲಿ ನೀಡಲಾಗಿದೆ. ಸ್ಟಾರ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಗೆ ನಾಲ್ಕು ಪ್ಯಾಕೇಜ್ ನೀಡಿದ್ದರೆ, ಬಿಎಸ್ ಆರ್ ಕಂಪನಿಗೆ ಒಂದು ಪ್ಯಾಕೇಜ್ ನೀಡಲಾ ಗಿದೆ.</p>.<p>ಕೆಲವು ಕಡೆಗಳಲ್ಲಿ ಈಗಾಗಲೇ ಒಳಚರಂಡಿ, ಗಟಾರ, ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಗಟಾರ ನಿರ್ಮಾಣ ಕಾರ್ಯ ನಡೆದಿದೆ. ಬಹುತೇಕ ಕಡೆಗಳಲ್ಲಿ ಇನ್ನೂ ರಸ್ತೆ ನಿರ್ಮಾಣ ಕಾರ್ಯವಾಗಿಲ್ಲ. ರಸ್ತೆ ಕಾಮಗಾರಿ ಇನ್ನೇನು ಆರಂಭವಾಗುವ ಹೊತ್ತಿಗೆ ಮಳೆಗಾಲ ಆರಂಭವಾಗುವುದರಿಂದ ಇನ್ನೂ ಮೂರ್ನಾಲ್ಕು ತಿಂಗಳು ಕಾಮಗಾರಿ ನಡೆಯುವುದಿಲ್ಲ.</p>.<p>ಸೆಪ್ಟೆಂಬರ್ನಲ್ಲಿ ಕಾಮಗಾರಿ ಮುಗಿಯದ್ದರಿಂದ 2026ರ ಮಾರ್ಚ್ ವರೆಗೆ ಕಾಮಗಾರಿ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಮಾರ್ಚ್ ಸಹ ಪೂರ್ಣ ಗೊಂಡಿದೆ. ಮತ್ತೇ ಕಾಮಗಾರಿ ಅವಧಿ ವಿಸ್ತರಿಸಬೇಕಾಗಿದೆ.</p>.<p>ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ. ಎಷ್ಟು ಅನುದಾನ ಬಿಡುಗಡೆಯಾಗಬೇಕಿದೆ. ಕಾಮಗಾರಿ ವಿಳಂಬಕ್ಕೆ ಕಾರಣಗಳೇನು ಎಂಬ ಮಾಹಿತಿಯನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿದರೆ, ಒಬ್ಬ ಅಧಿಕಾರಿ ಇನ್ನೊಬ್ಬ ಅಧಿಕಾರಿಯತ್ತ ತೋರಿಸುತ್ತಾನೆ.</p>.<p>ಪ್ರಾಧಿಕಾರಕ್ಕೆ ಹೊಸದಾಗಿ ಪ್ರಕಾಶ ತಪಶೆಟ್ಟಿ ಅವರನ್ನು ಅಧ್ಯಕ್ಷರ ನ್ನಾಗಿ ನೇಮಕ ಮಾಡಲಾಗಿದೆ. ಅವರೂ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ಎಚ್.ವೈ. ಮೇಟಿ ಅವರ ನಿಧನದ ನಂತರ ಬಿಟಿಡಿಎ ಆಡಳಿತ ಹಳಿ ತಪ್ಪಿದೆ.</p>.<p>ಅದನ್ನು ಸರಿದಾರಿಗೆ ತರುವ ಕೆಲಸ ಹೊಸ ಅಧ್ಯಕ್ಷರಿಂದ ಆಗಬೇಕಿದೆ.</p>.<p>ಮುಳುಗಡೆ ಸಂತ್ರಸ್ತರು ಹಕ್ಕು ಪತ್ರ ಪಡೆಯಲು ನಿತ್ಯ ಬಿಟಿಡಿಎ ಕಚೇರಿಗೆ ಅಲೆದಾಡುತ್ತಿದ್ದಾರೆ. ಒಂದೇ ಬಾರಿಗೆ ನೀಡಬಹುದಾಗಿದ್ದ ಹಕ್ಕುಪತ್ರಗಳನ್ನು ಹತ್ತಾರು ವರ್ಷದಿಂದ ನೀಡುವ ಕಾರ್ಯ ನಡೆದೇ ಇದೆ. ಮಧ್ಯವರ್ತಿಗಳಲ್ಲಿದೇ ಹಕ್ಕುಪತ್ರ ಪಡೆಯುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<div><blockquote>ಬಿಟಿಡಿಎಗೆ ಕಾಯಕಲ್ಪ ನೀಡುವ ಕಾರ್ಯ ಮಾಡಲಾಗುವುದು. ಸಂತ್ರಸ್ತರಿಗೇ ನೇರವಾಗಿ ಹಕ್ಕುಪತ್ರ ದೊರೆಯುವಂತೆ ಮಾಡಲಾಗುವುದು. </blockquote><span class="attribution"> ಪ್ರಕಾಶ ತಪಶೆಟ್ಟಿ, ಬಿಟಿಡಿಎ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>