<p>ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಹೊನ್ನರಹಳ್ಳಿ ಗ್ರಾಮದ ಬಳಿಯ ಗೋಮಾಳದಲ್ಲಿನ ಮಣ್ಣು ತೆಗೆಯಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರರಿಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.</p>.<p>‘ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಮಣ್ಣು ತೆಗೆಯಲು ಬಂದಿರುವುದನ್ನು ಮಂಗಳವಾರ ತಡೆದಿದ್ದೇವೆ. ಕೂಡಲೇ ನೀವು ನೀಡಿರುವ ಆದೇಶವನ್ನು ಹಿಂಪಡೆದು, ಗೋಮಾಳವನ್ನು ರಕ್ಷಣೆ ಮಾಡಬೇಕು’ ಎಂದು ಆಗ್ರಹಿಸಿ ಪ್ರತಿಭಟನಕಾರರು ಘೋಷಣೆ ಕೂಗಿದರು.</p>.<p>‘ಹೊನ್ನರಹಳ್ಳಿ ಮಾತ್ರವಲ್ಲದೇ ಚಿಕ್ಕಯರನಗೇರಿ, ಬೇವಿನಮಟ್ಟಿ, ಹಿರೇಯರನಕೇರಿ ಗ್ರಾಮಗಳ ಜಾನುವಾರುಗಳಿಗೆ ಈ ಗೋಮಾಳವೇ ಆಶ್ರಯವಾಗಿದೆ. ಆದ್ದರಿಂದ ಮಣ್ಣು ತೆಗೆಯುವುದನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.</p>.<p>‘ಎತ್ತು, ಹಸು, ಎಮ್ಮೆ, ಮೇಕೆ ಮುಂತಾದ ಜಾನುವಾರುಗಳನ್ನು ಅಲ್ಲಿಯೇ ಮೇಯಿಸಲಾಗುತ್ತದೆ. ಈಗ ಮಣ್ಣು ತೆಗೆದರೆ ಹುಲ್ಲುಗಾವಲು ಇಲ್ಲದಂತಾಗಿ ತೊಂದರೆಯಾಗುತ್ತಿದೆ. ಗೋವು ರಕ್ಷಣೆ ಮಾಡಿ ಎಂದು ಹೇಳುತ್ತೀರಿ. ಮೇವು ಇಲ್ಲದಿದ್ದರೆ, ರಕ್ಷಣೆ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p>‘ಈ ಪ್ರದೇಶದಲ್ಲಿ ಈಗಾಗಲೇ ಹಲವು ಗಿಡಗಳು ಬೆಳೆದು ನಿಂತಿವೆ. ಕಳೆದ ವರ್ಷ 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಅಲ್ಲಿನ ಮಣ್ಣನ್ನು ತೆಗೆಯುವುದರಿಂದ ಸಸಿಗಳು ಹಾಳಾಗುತ್ತವೆ’ ಎಂದು ತಿಳಿಸಿದರು.</p>.<p>‘ಅಮೃತ ಮಿಷನ್ ಯೋಜನೆಯಡಿ ಕೆಳಭಾಗದಲ್ಲಿ ಕೆರೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಅದಕ್ಕೂ ಈ ಕಾಮಗಾರಿ ಅಡ್ಡಿಯಾಗುತ್ತಿದೆ. ಐದು ಹಳ್ಳಿಗಳ ಜಾನುವಾರುಗಳಿಗೆ ತೊಂದರೆಯಾಗುತ್ತದೆ’ ಎಂದು ಮುಖಂಡ ಶಿವಣ್ಣ ದೂರಿದರು.</p>.<p>ವೀರಪ್ಪ ಮಾಗಿ, ಮಹಾಂತಪ್ಪ ಅಳ್ಳೊಳ್ಳಿ, ಸಂಗನಬಸಯ್ಯ, ಅಂದಾನಪ್ಪ ಕೊಣ್ಣೂರ, ಶರಣಯ್ಯ, ಗುರುಬಸಪ್ಪ, ಮೃತ್ಯುಂಜಯ್ಯ ಹಿರೇಮಠ ಮತ್ತಿತರರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.</p>.<p>ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ, ‘ಗೋಮಾಳ ನೀಡಿರುವುದನ್ನು ಪರಿಶೀಲನೆ ಮಾಡಲಾಗುವುದು. ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದರೆ, ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-19-1308666159</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಹೊನ್ನರಹಳ್ಳಿ ಗ್ರಾಮದ ಬಳಿಯ ಗೋಮಾಳದಲ್ಲಿನ ಮಣ್ಣು ತೆಗೆಯಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರರಿಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.</p>.<p>‘ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಮಣ್ಣು ತೆಗೆಯಲು ಬಂದಿರುವುದನ್ನು ಮಂಗಳವಾರ ತಡೆದಿದ್ದೇವೆ. ಕೂಡಲೇ ನೀವು ನೀಡಿರುವ ಆದೇಶವನ್ನು ಹಿಂಪಡೆದು, ಗೋಮಾಳವನ್ನು ರಕ್ಷಣೆ ಮಾಡಬೇಕು’ ಎಂದು ಆಗ್ರಹಿಸಿ ಪ್ರತಿಭಟನಕಾರರು ಘೋಷಣೆ ಕೂಗಿದರು.</p>.<p>‘ಹೊನ್ನರಹಳ್ಳಿ ಮಾತ್ರವಲ್ಲದೇ ಚಿಕ್ಕಯರನಗೇರಿ, ಬೇವಿನಮಟ್ಟಿ, ಹಿರೇಯರನಕೇರಿ ಗ್ರಾಮಗಳ ಜಾನುವಾರುಗಳಿಗೆ ಈ ಗೋಮಾಳವೇ ಆಶ್ರಯವಾಗಿದೆ. ಆದ್ದರಿಂದ ಮಣ್ಣು ತೆಗೆಯುವುದನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.</p>.<p>‘ಎತ್ತು, ಹಸು, ಎಮ್ಮೆ, ಮೇಕೆ ಮುಂತಾದ ಜಾನುವಾರುಗಳನ್ನು ಅಲ್ಲಿಯೇ ಮೇಯಿಸಲಾಗುತ್ತದೆ. ಈಗ ಮಣ್ಣು ತೆಗೆದರೆ ಹುಲ್ಲುಗಾವಲು ಇಲ್ಲದಂತಾಗಿ ತೊಂದರೆಯಾಗುತ್ತಿದೆ. ಗೋವು ರಕ್ಷಣೆ ಮಾಡಿ ಎಂದು ಹೇಳುತ್ತೀರಿ. ಮೇವು ಇಲ್ಲದಿದ್ದರೆ, ರಕ್ಷಣೆ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p>‘ಈ ಪ್ರದೇಶದಲ್ಲಿ ಈಗಾಗಲೇ ಹಲವು ಗಿಡಗಳು ಬೆಳೆದು ನಿಂತಿವೆ. ಕಳೆದ ವರ್ಷ 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಅಲ್ಲಿನ ಮಣ್ಣನ್ನು ತೆಗೆಯುವುದರಿಂದ ಸಸಿಗಳು ಹಾಳಾಗುತ್ತವೆ’ ಎಂದು ತಿಳಿಸಿದರು.</p>.<p>‘ಅಮೃತ ಮಿಷನ್ ಯೋಜನೆಯಡಿ ಕೆಳಭಾಗದಲ್ಲಿ ಕೆರೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಅದಕ್ಕೂ ಈ ಕಾಮಗಾರಿ ಅಡ್ಡಿಯಾಗುತ್ತಿದೆ. ಐದು ಹಳ್ಳಿಗಳ ಜಾನುವಾರುಗಳಿಗೆ ತೊಂದರೆಯಾಗುತ್ತದೆ’ ಎಂದು ಮುಖಂಡ ಶಿವಣ್ಣ ದೂರಿದರು.</p>.<p>ವೀರಪ್ಪ ಮಾಗಿ, ಮಹಾಂತಪ್ಪ ಅಳ್ಳೊಳ್ಳಿ, ಸಂಗನಬಸಯ್ಯ, ಅಂದಾನಪ್ಪ ಕೊಣ್ಣೂರ, ಶರಣಯ್ಯ, ಗುರುಬಸಪ್ಪ, ಮೃತ್ಯುಂಜಯ್ಯ ಹಿರೇಮಠ ಮತ್ತಿತರರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.</p>.<p>ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ, ‘ಗೋಮಾಳ ನೀಡಿರುವುದನ್ನು ಪರಿಶೀಲನೆ ಮಾಡಲಾಗುವುದು. ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದರೆ, ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-19-1308666159</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>