ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ನಿಧ೯ರಿಸಿರುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕೂಡಲಸಂಗಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾಡ ದೊರೆಗಳಿಗೆ (ಬಿ.ಎಸ್.ಯಡಿಯೂರಪ್ಪ) ಅವರಿಗೆ ಹೇಳಿ ಹೇಳಿ ಸಾಕಾಗಿದೆ, ಇನ್ನು ದೇಶದ ದೊರೆಗಳಿಗೆ ಹೇಳುತ್ತೇವೆ ಎಂದರು.
ಪಂಚಮಸಾಲಿ ಲಿಂಗಾಯತರೆಂದರೆ ನಾಲ್ಕೇ ಜನರಲ್ಲ, ಬದಲಾಗಿ ಲಕ್ಷ ಲಕ್ಷ ಜನರಿದ್ದೇವೆ.ಅದನ್ನು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿ ಕೊಡುತ್ತೇವೆ. ನಮ್ಮ ಸಮಾಜದ ನಾಯಕ ಮುರುಗೇಶ ನಿರಾಣಿ ಅವರ ಕಾಯ೯ಕ್ರಮಕ್ಕೆ ಅಮಿತ್ ಶಾ ಬರುತ್ತಿದ್ದಾರೆ.
ಈ ವೇಳೆ ಅವರನ್ನು ಭೇಟಿಯಾಗಿ ಕೇಂದ್ರದಲ್ಲಿ ಬಿಜೆಪಿ ಸಕಾ೯ರ ಬರಲು ಪಂಚಮಸಾಲಿ ಸಮುದಾಯದವರ ಪಾತ್ರ ದೊಡ್ಡದಿದೆ ಅನ್ನೋದನ್ನ ತಿಳಿಸುತ್ತೇವೆ ಎಂದರು.