ಅಭಿಯಾನದ ಅಂಗವಾಗಿ ಜಗದೀಶ ಶೆಟ್ಟರ್ ನಗರದ ಐವರು ಪ್ರಮುಖರ ಮನೆಗೆ ಭೇಟಿ ನೀಡಲಿದ್ದಾರೆ. ವಕೀಲರು, ವೈದ್ಯರು, ವ್ಯಾಪಾರಿಗಳು ಹೀಗೆ ಸಮಾಜದ ಬೇರೆ ಬೇರೆ ವಲಯದ ಗಣ್ಯರ ಮನೆಗೆ ತೆರಳಿ ಅವರಿಗೆ ಅಭಿಯಾನದ ಉದ್ದೇಶವನ್ನು ತಿಳಿಸಿಕೊಡಲಿದ್ದಾರೆ. ಯಾರ ಮನೆಗೆ ಭೇಟಿ ನೀಡಲಿದ್ದಾರೆ ಎಂಬ ವಿವರವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದರು.