ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನರೇಂದ್ರ ಮೋದಿ ಚಂದ್ರಯಾನ ವೀಕ್ಷಣೆಗೆ ಬೆಂಗಳೂರಿಗೆ ಬಂದರೂ, ಸಂತ್ರಸ್ತರ ಪರ ನೆರವು ಕೋರಲು ತಮ್ಮೊಡನೆ ಮಾತನಾಡಲು ಇಚ್ಛಿಸಿದ ಮುಖ್ಯಮಂತ್ರಿಗೆ ಭೇಟಿಗೆ ಅವಕಾಶ ನೀಡಲಿಲ್ಲ. ಯಡಿಯೂರಪ್ಪ ಮೇಲೆ ಕೋಪವಿದ್ದರೆ ಅವರನ್ನು ಕಿತ್ತು ಹಾಕಲಿ, ಅದನ್ನು ಸಂತ್ರಸ್ತರ ವಿರುದ್ಧ ತೀರಿಸಿಕೊಳ್ಳುವುದೇಕೆ ಎಂದು ಪ್ರಶ್ನಿಸಿದರು.