‘ರಿತೇಶ್ ಹಾಗೂ ಆರೋಪಿ ಪರಸ್ಪರ ಅಪರಿಚಿತರು. ಘಟನೆಗೆ ಮುನ್ನ ಇಬ್ಬರ ನಡುವೆ ಯಾವುದೇ ತರಹದ ಮನಸ್ತಾಪ, ಜಗಳ ಆಗಿರಲಿಲ್ಲ. ಭೋಪಾಲ್ನತ್ತ ಪ್ರಯಾಣಿಸುತ್ತಿದ್ದ ರಿತೇಶ್ ಹಾಗೂ ಆತನ ಸಂಬಂಧಿ ಸುಮಿತ್ ಸಿಂಗ್ ಬಾಗಿಲ ಬಳಿ ಕುಳಿತಿದ್ದರು. ಈ ವೇಳೆ ರಿತೇಶ್ನನ್ನು ಆರೋಪಿ ಪಾಲ್ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾನೆ’ ಎಂದು ಸುಖಿ ಸೆವಾನಿಯಾ ಪೊಲೀಸ್ ಠಾಣಾಧಿಕಾರಿ ಹೇಮಂತ್ ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.