<blockquote>ವೀರಶೈವ ಲಿಂಗಾಯತ, ಮರಾಠ ಸಮಾಜಕ್ಕೆ ಅವಮಾನ | ಅಭಿವೃದ್ಧಿ ಕಾರ್ಯಗಳು ಸ್ಥಗಿತ | ಅಬ್ದುಲ್ ಕಲಾಂರಂತಹ ಮುಸ್ಲಿಮರಾಗಿ</blockquote>.<p><strong>ಬಾಗಲಕೋಟೆ:</strong> ‘ಮೂರ್ತಿಗಳ ಪ್ರತಿಷ್ಠಾಪನೆಗೆ ಅನುದಾನ, ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭ ಚುನಾವಣೆ ಗಿಮಿಕ್’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.</p>.<p>ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಾಠ ಸಮಾಜದವರಾಗಲೀ, ನಾವಾಗಲಿ ಅನುದಾನ ಕೋರಿಲ್ಲ. ಬಿವಿವಿ ಸಂಘದಿಂದ ಬಸವೇಶ್ವರ ಮೂರ್ತಿ, ಮರಾಠ ಸಮಾಜದಿಂದ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಮಾಡಿಸಲಾಗಿದೆ. ಅವುಗಳ ಪ್ರತಿಷ್ಠಾಪನೆಗೆ ಅನುಮತಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.</p>.<p>ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡದೇ ವೀರಶೈವ ಲಿಂಗಾಯತ ಹಾಗೂ ಮರಾಠ ಸಮಾಜಕ್ಕೆ ಅವಮಾನ ಮಾಡಲಾಗುತ್ತಿದೆ. ಪ್ರತಿಷ್ಠಾಪನೆ ಮಾಡಲು ಹೋದವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ಟೀಕಿಸಿದರು.</p>.<p>‘25 ವರ್ಷಗಳ ಹಿಂದೆ ನಾನೊಬ್ಬನೇ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ವೈದ್ಯಕೀಯ ಕಾಲೇಜು ಆರಂಭಿಸಿದ್ದೆ. ಆದರೆ, ರಾಜ್ಯ ಸರ್ಕಾರ ದಶಕದಿಂದ ಕಾಲೇಜು ಆರಂಭದಲ್ಲಿಯೇ ಇದೆ. ಹಿಂದಿನ ವರ್ಷ ಬಜೆಟ್ನಲ್ಲಿ ಘೋಷಣೆಯಾಗಿದ್ದಕ್ಕೆ ಇಷ್ಟು ದಿನ ಏಕೆ ಶಂಕುಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ. ರಾಜೀವ್ಗಾಂಧಿ ವಿಶ್ವವಿದ್ಯಾಲಯ ಅನುದಾನ ನೀಡುತ್ತದೆ ಎನ್ನುವುದು ಹಾಸ್ಯಾಸ್ಪದ’ ಎಂದು ವಾಗ್ದಾಳಿ ನಡೆಸಿದರು.</p>.<p>‘ಬಿಟಿಡಿಎ ನ ₹388 ಕೋಟಿ ಕಾರ್ಪಸ್ ಫಂಡ್ ವಾಪಸ್ ನೀಡಿಲ್ಲ. ಭಗವತಿ, ಶಿರೂರ ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಸಂಚರಿಸಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಹೆರಕಲ್ನಿಂದ ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯೂ ಜಾರಿಯಾಗಿಲ್ಲ. ಮತದಾರರು ಜಾಗೃತರಾಗಿದ್ದು, ಅಭಿವೃದ್ಧಿ ಮಾಡುವವರಿಗೆ ಮತ ಹಾಕಬೇಕು’ ಎಂದರು.</p>.<p>‘2006ರಲ್ಲಿ ಸರ್ಕಾರವಿದ್ದಾಗ ಲೋಕ್ ಅದಾಲತ್ ಮೂಲಕ ಪರಿಹಾರ ವಿತರಣೆ ಮಾಡಿದ್ದೇವೆ. ಮುಚಖಂಡಿ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ್ದೇವೆ. ಮೂರು ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿವೆ. ಕ್ಷೇತ್ರಕ್ಕೆ ವಾರಸುದಾರರು ಇದ್ದಾರೋ, ಇಲ್ಲವೋ ಗೊತ್ತಿಲ್ಲ. ಚುನಾಯಿತ ಪ್ರತಿನಿಧಿಯಲ್ಲದ ವ್ಯಕ್ತಿಯ ಕಾಣದ ಕೈ ಮಾತ್ರ ಕಾಣುತ್ತದೆ. ಊರಿನವರಲ್ಲ, ಕ್ಷೇತ್ರದವರಲ್ಲದ ಕೈಯಲ್ಲಿ ಕ್ಷೇತ್ರ ನೀಡಲಾಗಿದೆ. ಡೀಲಿಂಗ್ ಮಾಸ್ಟರ್ ಅನ್ನು ದೂರ ಇಡಬೇಕು. ಕಾಂಗ್ರೆಸ್ ಮುಖಂಡರಿಗೆ ಸ್ವಾಭಿಮಾನವಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>‘ವಿವಿಧ ಕಾರ್ಯಕ್ರಮಗಳ ಅಂಗವಾಗಿ ಮೆರವಣಿಗೆಗಳು ನಡೆಯುತ್ತಿರುತ್ತವೆ. ಕಲ್ಲು ಒಗೆಯುವುದರಿಂದ ಶಿವಾಜಿ ಮಹಾರಾಜ ಸಣ್ಣವರಾಗುವುದಿಲ್ಲ. ಶಾಂತಿ, ಸಹೋದರರಂತೆ ಇರಬೇಕು. ಆರ್ಎಸ್ಎಸ್ನಲ್ಲಿಯೂ ರಾಷ್ಟ್ರೀಯ ಮುಸ್ಲಿಂ ಮಂಚ್ ಇದೆ. ಅಬ್ದುಲ್ ಕಲಾಂರಂತಹ ಮುಸ್ಲಿಮರಾಗಬೇಕು. ಕಾಂಗ್ರೆಸ್ ನಿಮ್ಮನ್ನು ವೋಟ್ ಬ್ಯಾಂಕ್ ಆಗಿಸಿಕೊಂಡಿದೇ ಹೊರತು, ಅಭಿವೃದ್ಧಿ ಮಾಡಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ವೀರಶೈವ ಲಿಂಗಾಯತ, ಮರಾಠ ಸಮಾಜಕ್ಕೆ ಅವಮಾನ | ಅಭಿವೃದ್ಧಿ ಕಾರ್ಯಗಳು ಸ್ಥಗಿತ | ಅಬ್ದುಲ್ ಕಲಾಂರಂತಹ ಮುಸ್ಲಿಮರಾಗಿ</blockquote>.<p><strong>ಬಾಗಲಕೋಟೆ:</strong> ‘ಮೂರ್ತಿಗಳ ಪ್ರತಿಷ್ಠಾಪನೆಗೆ ಅನುದಾನ, ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭ ಚುನಾವಣೆ ಗಿಮಿಕ್’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.</p>.<p>ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಾಠ ಸಮಾಜದವರಾಗಲೀ, ನಾವಾಗಲಿ ಅನುದಾನ ಕೋರಿಲ್ಲ. ಬಿವಿವಿ ಸಂಘದಿಂದ ಬಸವೇಶ್ವರ ಮೂರ್ತಿ, ಮರಾಠ ಸಮಾಜದಿಂದ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಮಾಡಿಸಲಾಗಿದೆ. ಅವುಗಳ ಪ್ರತಿಷ್ಠಾಪನೆಗೆ ಅನುಮತಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.</p>.<p>ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡದೇ ವೀರಶೈವ ಲಿಂಗಾಯತ ಹಾಗೂ ಮರಾಠ ಸಮಾಜಕ್ಕೆ ಅವಮಾನ ಮಾಡಲಾಗುತ್ತಿದೆ. ಪ್ರತಿಷ್ಠಾಪನೆ ಮಾಡಲು ಹೋದವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ಟೀಕಿಸಿದರು.</p>.<p>‘25 ವರ್ಷಗಳ ಹಿಂದೆ ನಾನೊಬ್ಬನೇ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ವೈದ್ಯಕೀಯ ಕಾಲೇಜು ಆರಂಭಿಸಿದ್ದೆ. ಆದರೆ, ರಾಜ್ಯ ಸರ್ಕಾರ ದಶಕದಿಂದ ಕಾಲೇಜು ಆರಂಭದಲ್ಲಿಯೇ ಇದೆ. ಹಿಂದಿನ ವರ್ಷ ಬಜೆಟ್ನಲ್ಲಿ ಘೋಷಣೆಯಾಗಿದ್ದಕ್ಕೆ ಇಷ್ಟು ದಿನ ಏಕೆ ಶಂಕುಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ. ರಾಜೀವ್ಗಾಂಧಿ ವಿಶ್ವವಿದ್ಯಾಲಯ ಅನುದಾನ ನೀಡುತ್ತದೆ ಎನ್ನುವುದು ಹಾಸ್ಯಾಸ್ಪದ’ ಎಂದು ವಾಗ್ದಾಳಿ ನಡೆಸಿದರು.</p>.<p>‘ಬಿಟಿಡಿಎ ನ ₹388 ಕೋಟಿ ಕಾರ್ಪಸ್ ಫಂಡ್ ವಾಪಸ್ ನೀಡಿಲ್ಲ. ಭಗವತಿ, ಶಿರೂರ ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಸಂಚರಿಸಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಹೆರಕಲ್ನಿಂದ ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯೂ ಜಾರಿಯಾಗಿಲ್ಲ. ಮತದಾರರು ಜಾಗೃತರಾಗಿದ್ದು, ಅಭಿವೃದ್ಧಿ ಮಾಡುವವರಿಗೆ ಮತ ಹಾಕಬೇಕು’ ಎಂದರು.</p>.<p>‘2006ರಲ್ಲಿ ಸರ್ಕಾರವಿದ್ದಾಗ ಲೋಕ್ ಅದಾಲತ್ ಮೂಲಕ ಪರಿಹಾರ ವಿತರಣೆ ಮಾಡಿದ್ದೇವೆ. ಮುಚಖಂಡಿ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ್ದೇವೆ. ಮೂರು ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿವೆ. ಕ್ಷೇತ್ರಕ್ಕೆ ವಾರಸುದಾರರು ಇದ್ದಾರೋ, ಇಲ್ಲವೋ ಗೊತ್ತಿಲ್ಲ. ಚುನಾಯಿತ ಪ್ರತಿನಿಧಿಯಲ್ಲದ ವ್ಯಕ್ತಿಯ ಕಾಣದ ಕೈ ಮಾತ್ರ ಕಾಣುತ್ತದೆ. ಊರಿನವರಲ್ಲ, ಕ್ಷೇತ್ರದವರಲ್ಲದ ಕೈಯಲ್ಲಿ ಕ್ಷೇತ್ರ ನೀಡಲಾಗಿದೆ. ಡೀಲಿಂಗ್ ಮಾಸ್ಟರ್ ಅನ್ನು ದೂರ ಇಡಬೇಕು. ಕಾಂಗ್ರೆಸ್ ಮುಖಂಡರಿಗೆ ಸ್ವಾಭಿಮಾನವಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>‘ವಿವಿಧ ಕಾರ್ಯಕ್ರಮಗಳ ಅಂಗವಾಗಿ ಮೆರವಣಿಗೆಗಳು ನಡೆಯುತ್ತಿರುತ್ತವೆ. ಕಲ್ಲು ಒಗೆಯುವುದರಿಂದ ಶಿವಾಜಿ ಮಹಾರಾಜ ಸಣ್ಣವರಾಗುವುದಿಲ್ಲ. ಶಾಂತಿ, ಸಹೋದರರಂತೆ ಇರಬೇಕು. ಆರ್ಎಸ್ಎಸ್ನಲ್ಲಿಯೂ ರಾಷ್ಟ್ರೀಯ ಮುಸ್ಲಿಂ ಮಂಚ್ ಇದೆ. ಅಬ್ದುಲ್ ಕಲಾಂರಂತಹ ಮುಸ್ಲಿಮರಾಗಬೇಕು. ಕಾಂಗ್ರೆಸ್ ನಿಮ್ಮನ್ನು ವೋಟ್ ಬ್ಯಾಂಕ್ ಆಗಿಸಿಕೊಂಡಿದೇ ಹೊರತು, ಅಭಿವೃದ್ಧಿ ಮಾಡಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>