ಗದ್ದನಕೇರಿ ಕ್ರಾಸ್ನಲ್ಲಿ ಕಾದು ನಿಂತಿದ್ದ ಎಎಸ್ಐ ಎಸ್.ಎಸ್.ನರಸಪ್ಪನವರ ನೇತೃತ್ವದಲ್ಲಿ ಸಿಬ್ಬಂದಿಯಾದ ಎಸ್.ಆರ್. ಭಜಂತ್ರಿ, ಬಿ.ವೈ.ಮಲ್ಲಾಡದ, ಕೆ.ಡಿ.ಹಡಗಲಿ, ಮುತ್ತುರಾಜ ಪೂಜಾರ, ಎಸ್.ಬಿ.ಕೋತಿನ ಕ್ರೂಸರ್ ವಾಹನವನ್ನು ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ಮರುದಿನ ಪೋಷಕರನ್ನು ಕರೆಸಿ ಮಕ್ಕಳ ಕಲ್ಯಾಣ ಸಮಿತಿ ಉಸ್ತುವಾರಿಯಲ್ಲಿ ಮುಚ್ಚಳಿಕೆ ಬರೆಸಿಕೊಂಡು 18 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ತಾಕೀತು ಮಾಡಿ ಕಳುಹಿಸಿಕೊಡಲಾಗಿದೆ. ಬಾಲಕಿಯನ್ನು ಮದುವೆಯಾಗಲು ಹೊರಟಿದ್ದ ವರ ಕೂಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.