ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ದಂಪತಿ.‌‌ ಪತಿ ಸಾವು. ಪತ್ನಿ ಸಾವಿನ ದವಡೆಯಿಂದ ಪಾರು

Last Updated 26 ಮೇ 2019, 7:41 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಕೊಲ್ಹಾರ ಬ್ರೀಡ್ಜ್ ನಿಂದ ಕೃಷ್ಣಾ ನದಿಗೆ ಹಾರಲು ಯತ್ನಿಸಿ ಪತಿ ಸಾವನಪ್ಪಿ,‌ ಪತ್ನಿ ಪಾರಾದ ಘಟನೆ ಶನಿವಾರ ನಡೆದಿದೆ.

ಬೀಳಗಿ ತಾಲೂಕಿನ ತೋಳಮಟ್ಟಿ ಗ್ರಾಮದ ನಿವಾಸಿಗಳಾದ ರಮೇಶ ಹಾಗೂ ಆತ್ಮಹತ್ಯೆಗೆ ಯತ್ನಿಸಿದವರು.

ಮದುವೆ ಕಾರ್ಯ ಮುಗಿಸಿಕೊಂಡು ಮಲ್ಲಮ್ಮ ನ ತವರು ಮನೆ ಬಸವನ ಬಾಗೇವಾಡಿ ತಾಲೂಕಿನ ಸಿದ್ದನಾಥ ಗ್ರಾಮಕ್ಕೆ ಬರುವಾಗ ಕೋಲ್ಹಾರ ಸೇತುವೆ ಹತ್ತಿರ ನಡೆದ ಘಟನೆ.

ನಿನ್ನೆ ಸಂಜೆ ಬ್ರೀಡ್ಜ್ ಮೇಲಿನಿಂದ ರಮೇಶ್ ನೀರಿಗೆ ಬಿದ್ದಿದ್ದಾನೆ. ಗಂಡನ ಜೊತೆಯಲ್ಲಿ ನದಿಗೆ ಹಾರುವಾಗ ಸೇತುವೆಯ ಗೋಡೆಗೆ ಮಲ್ಲಮ್ಮಳ ಸೀರೆ ಬ್ರಿಡ್ಜ್ ಗೆ ಸಿಲುಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮಲ್ಲಮ್ಮಹೆ ಕೋಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೀರಿನಲ್ಲಿ ಮುಳುಗಿದ್ದ ರಮೇಶ ಮೃತ ದೇಹಕ್ಕಾಗಿ ಸ್ಥಳಿಯ ಮೀನುಗಾರರು ಹಾಗೂ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ. ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT