ಮುಂಜಾನೆ ಕೆಲ ಹೊತ್ತು ಸಾರ್ವಜನಿಕರು ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ನಗರದ ಕಿರಾಣಿ ಅಂಗಡಿ ಹಾಗೂ ಸೂಪರ್ ಮಾರ್ಕೆಟ್ಗಳ ಎದುರು ಜನರು ಸಾಲುಗಟ್ಟಿದರು. ತರಕಾರಿ–ಹಣ್ಣಿನ ವ್ಯಾಪಾರವೂ ಜೊರಾಗಿ ನಡೆಯಿತು. ಅಂಗಡಿಗಳ ಮುಂದೆ ಹಾಕಲಾಗಿದ್ದ ಮಾರ್ಕಿಂಗ್ ಮೇಲೆ ನಿಂತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡರು. ಕೆಲವೆಡೆ ಅಂಗಡಿ ಮಾಲೀಕರು ಹಾಗೂಪೊಲೀಸರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ನಿಗದಿತ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡರು.