ಬೀಳಗಿ ತಾಲ್ಲೂಕಿನ ರೊಳ್ಳಿ ಗ್ರಾಮದ ಸಿದ್ದಪ್ಪ ಹಳಬರ–ದಂಡವ್ವ ದಂಪತಿ ಪುತ್ರ ನಿಜಲಿಂಗಪ್ಪ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ರೊಳ್ಳಿ ಹಾಗೂ ಪಕ್ಕದ ಗಿರಿಸಾಗರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸೈಕ್ಲಿಸ್ಟ್ಗಳು ಒಡಮೂಡಿದ್ದು, ಅದೇ ಪ್ರೇರಣೆಯಿಂದ ನಿಜಲಿಂಗಪ್ಪ ತಾವು ಸೈಕ್ಲಿಂಗ್ನಲ್ಲಿ ಮಹತ್ತರ ಸಾಧನೆಯ ಕನಸು ಹೊತ್ತಿದ್ದಾರೆ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ಸೈಕ್ಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಊರಿನ ಹಿರಿಯ ಸೈಕ್ಲಿಸ್ಟ್ಗಳ ಅಭ್ಯಾಸದ ರೀತಿ ಗಮನಿಸುತ್ತಾ ಅದೇ ಹಾದಿಯಲ್ಲಿ ಸಾಗಿರುವ ನಿಜಲಿಂಗಪ್ಪನದು ಏಕಲವ್ಯನ ಶ್ರಮ.