<p>ಮಹಾಲಿಂಗಪುರ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಡೆಯುವ ಸಾಲವನ್ನು ಸ್ವ ಸಹಾಯ ಸಂಘದ ಸದಸ್ಯೆಯರು ಉತ್ತಮ ಕೆಲಸಗಳಿಗಾಗಿ ಸದ್ಬಳಕೆ ಮಾಡಿಕೊಂಡು ಕುಟುಂಬದ ಆರ್ಥಿಕ ಸಬಲತೆ ಸಾಧಿಸಲು ಪ್ರಯತ್ನಿಸಿ’ ಎಂದು ಯೋಜನೆಯ ಮುಧೋಳ ತಾಲ್ಲೂಕು ಅಧಿಕಾರಿ ರಾಜು ಎನ್. ಹೇಳಿದರು.</p>.<p>ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರನ್ನಬೆಳಗಲಿ ವಲಯದ ಗುರುನಾಥಾರೂಢ ಸ್ವ-ಸಹಾಯ ಸಂಘದ ಸದಸ್ಯರಿಗೆ ಯೋಜನೆಯಿಂದ ಮಂಜೂರಾದ ₹4.50 ಲಕ್ಷ ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.</p>.<p>‘ಬಡವರಿಗೆ ಬ್ಯಾಂಕ್ಗಳಿಂದ ನೇರವಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೊಡಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಂಸ್ಥೆ ಮೂಲಕ ಎಲ್ಲಾ ಸಾಲಗಳ ಮರುಪಾವತಿ ಜವಾಬ್ದಾರಿ ನೀಡಲಾಗಿದೆ. ಇದರಿಂದ ಬ್ಯಾಂಕಗಳು ಯೋಜನೆಯ ಸ್ವ-ಸಹಾಯ ಸಂಘಗಳ ವ್ಯವಸ್ಥೆ ಮೂಲಕ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಯಾವುದೇ ಆಸ್ತಿಪಾಸ್ತಿ ಅಡಮಾನ ಪಡೆಯದೇ, ದಾಖಲೆ ಪತ್ರ ಇತ್ಯಾದಿಗಳಿಲ್ಲದೇ ಅತೀ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕನ ಸಾಲ ಸೌಲಭ್ಯ ಸಿಗುತ್ತಿದೆ’ ಎಂದರು.</p>.<p>ಯೋಜನೆಯ ರನ್ನಬೆಳಗಲಿ ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿ ಅನ್ನಪೂರ್ಣ ಧಡೂತಿ, ಹಣ ಮರು ಪಾವತಿ ಕೇಂದ್ರದ ಚೈತ್ರಾ ಲಾತೂರ, ಗುರುನಾಥಾರೂಢ ಸ್ವ-ಸಹಾಯ ಸಂಘದ ಅಧ್ಯಕ್ಷೆ ಜಯಶ್ರೀ ಮೋರೆ, ಸುಜಾತಾ ಹೂಗಾರ, ಅನ್ನಪೂರ್ಣ ಚಿಮ್ಮಡ, ಬೋರವ್ವ ಹೂಗಾರ, ಲಲಿತಾ ಬುರುಡ, ಮಾನವ್ವ ಕಲ್ಯಾಣಿ, ಸಿದ್ದವ್ವ ಕಿಡದಾಳ, ಕಲ್ಲವ್ವ ಲೋಕನ್ನವರ, ಶಶಿಕಲಾ ಮೋರೆ, ಸರೋಜನಿ ಆರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-19-1933529793</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾಲಿಂಗಪುರ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಡೆಯುವ ಸಾಲವನ್ನು ಸ್ವ ಸಹಾಯ ಸಂಘದ ಸದಸ್ಯೆಯರು ಉತ್ತಮ ಕೆಲಸಗಳಿಗಾಗಿ ಸದ್ಬಳಕೆ ಮಾಡಿಕೊಂಡು ಕುಟುಂಬದ ಆರ್ಥಿಕ ಸಬಲತೆ ಸಾಧಿಸಲು ಪ್ರಯತ್ನಿಸಿ’ ಎಂದು ಯೋಜನೆಯ ಮುಧೋಳ ತಾಲ್ಲೂಕು ಅಧಿಕಾರಿ ರಾಜು ಎನ್. ಹೇಳಿದರು.</p>.<p>ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರನ್ನಬೆಳಗಲಿ ವಲಯದ ಗುರುನಾಥಾರೂಢ ಸ್ವ-ಸಹಾಯ ಸಂಘದ ಸದಸ್ಯರಿಗೆ ಯೋಜನೆಯಿಂದ ಮಂಜೂರಾದ ₹4.50 ಲಕ್ಷ ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.</p>.<p>‘ಬಡವರಿಗೆ ಬ್ಯಾಂಕ್ಗಳಿಂದ ನೇರವಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೊಡಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಂಸ್ಥೆ ಮೂಲಕ ಎಲ್ಲಾ ಸಾಲಗಳ ಮರುಪಾವತಿ ಜವಾಬ್ದಾರಿ ನೀಡಲಾಗಿದೆ. ಇದರಿಂದ ಬ್ಯಾಂಕಗಳು ಯೋಜನೆಯ ಸ್ವ-ಸಹಾಯ ಸಂಘಗಳ ವ್ಯವಸ್ಥೆ ಮೂಲಕ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಯಾವುದೇ ಆಸ್ತಿಪಾಸ್ತಿ ಅಡಮಾನ ಪಡೆಯದೇ, ದಾಖಲೆ ಪತ್ರ ಇತ್ಯಾದಿಗಳಿಲ್ಲದೇ ಅತೀ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕನ ಸಾಲ ಸೌಲಭ್ಯ ಸಿಗುತ್ತಿದೆ’ ಎಂದರು.</p>.<p>ಯೋಜನೆಯ ರನ್ನಬೆಳಗಲಿ ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿ ಅನ್ನಪೂರ್ಣ ಧಡೂತಿ, ಹಣ ಮರು ಪಾವತಿ ಕೇಂದ್ರದ ಚೈತ್ರಾ ಲಾತೂರ, ಗುರುನಾಥಾರೂಢ ಸ್ವ-ಸಹಾಯ ಸಂಘದ ಅಧ್ಯಕ್ಷೆ ಜಯಶ್ರೀ ಮೋರೆ, ಸುಜಾತಾ ಹೂಗಾರ, ಅನ್ನಪೂರ್ಣ ಚಿಮ್ಮಡ, ಬೋರವ್ವ ಹೂಗಾರ, ಲಲಿತಾ ಬುರುಡ, ಮಾನವ್ವ ಕಲ್ಯಾಣಿ, ಸಿದ್ದವ್ವ ಕಿಡದಾಳ, ಕಲ್ಲವ್ವ ಲೋಕನ್ನವರ, ಶಶಿಕಲಾ ಮೋರೆ, ಸರೋಜನಿ ಆರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-19-1933529793</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>