ಹೋಟೆಲ್, ರಸ್ತೆ ಬದಿಯ ತಿನಿಸಿನ ಅಂಗಡಿಗಳ ಮುಸುರೆ, ಉಳಿದ ಆಹಾರ ಬೀದಿ ನಾಯಿಗಳಿಗೆ ಆಹಾರದ ಮೂಲವಾಗಿತ್ತು. ಈಗ ಅವು ಬಾಗಿಲು ಮುಚ್ಚಿವೆ. ಬೇಸಿಗೆಯ ಕಾರಣ ಕುಡಿಯಲು ನೀರು ಸಿಗುವುದು ಕಷ್ಟವಾಗಿದೆ. ಹೀಗಾಗಿ ಹಸಿವು ನೀಗಿಸಿಕೊಳ್ಳಲು ಅವು ಹಂದಿಗಳ ಮೇಲೆ ದಾಳಿ ಆರಂಭಿಸಿವೆ. ಬಿಡಾಡಿ ದನಗಳ ಹಿಂಡಿನಲ್ಲಿ ಅಡ್ಡಾಡುವ ಕರುಗಳು ಕೂಡ ನಾಯಿಗಳ ದಾಳಿಗೆ ತುತ್ತಾಗುತ್ತಿವೆ. ಇತ್ತೀಚೆಗೆ ನವನಗರದ 10ನೇ ಸೆಕ್ಟರ್ನಲ್ಲಿ ಎರಡು ಕರುಗಳು ನಾಯಿಗಳ ಹಿಂಡಿನ ದಾಳಿಗೆ ಸಿಲುಕಿ ಸಾವನ್ನಪ್ಪಿವೆ.