ಪ್ರಧಾನಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕಲ್ಪನಾ ಕುಲಕರ್ಣಿ ಮಾತನಾಡಿ, ‘ಮೋಟಾರು ಅಪಘಾತ ಕಾಯ್ದೆ, ಚೆಕ್ಬೌನ್ಸ್, ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶ ನೀಡಿಕೆ, ಆಸ್ತಿ ಪಾಲು ದಾವೆ, ಬ್ಯಾಂಕ್ ದಾವೆ, ಒಕ್ಕಲೆಬ್ಬಿಸುವುದು ಹಾಗೂ ರಾಜಿಗೆ ಅರ್ಹವಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿಪರಿಹರಿಸಲಾಗುತ್ತದೆ. ಜಿಲ್ಲೆಯಲ್ಲಿ ಲೋಕಅದಾಲತ್ ಎದುರು ಒಟ್ಟು 42,097 ಪ್ರಕರಣಗಳು ಬಾಕಿ ಇದ್ದು, ಮೆಗಾ ಇ–ಲೋಕಅದಾಲತ್ನಲ್ಲಿ ಪಾಲ್ಗೊಳ್ಳುವವರು ಸೆಪ್ಟೆಂಬರ್ 18ರವರೆಗೂ ನೋಂದಣಿ ಮಾಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.