ಇಳಕಲ್ ಸಹಕಾರಿ ಬ್ಯಾಂಕ್ ನಿರ್ದೇಶಕ ಪ್ರವೀಣ ಹೂಲಗೇರಿ ಸಿ.ಡಿ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಸರಸ್ವತಿ ಈಟಿ ಮಾತನಾಡಿದರು. ನಿರ್ಮಾಪಕ ಹುಲ್ಲಪ್ಪ ಹಳ್ಳೂರ ಅಧ್ಯಕ್ಷತೆ ವಹಿಸಿದ್ದರು. ತೃಪ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಭಾವತಿ ಹಳ್ಳೂರ, ಕಸಾಪ ಇಳಕಲ್ ಘಟಕದ ಗೌರವ ಕಾರ್ಯದರ್ಶಿ ಮುತ್ತು ಬೀಳಗಿ, ನಗರಸಭೆ ಸದಸ್ಯ ಮೌಲೇಶ ಬಂಡಿವಡ್ಡರ, ಶರಣಪ್ಪ ಅಮರಾವತಿ, ಹನಮಂತ ತುಂಬಗಿ, ವಿರೇಶ ಎಂ.ಬಿ, ವೆಂಕಟೇಶ ವಡ್ಡರ, ಎಂ.ಆರ್. ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ನಡೆದ ಬಾಗಲಕೋಟೆಯ ಯಶ್ ಮೆಲೋಡಿಯಸ್ ತಂಡದ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.