<p><strong>ಜಮಖಂಡಿ:</strong> 12 ವರ್ಷಗಳಿಂದ ನಡೆಯುತ್ತಿರುವ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ(ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆ) ಕಾಮಗಾರಿ ಪೂರ್ಣಗೊಳಿಸುವಿದು ವಿಳಂಬವಾಗುತ್ತಿದೆ ಎಂದು ಚಿಕ್ಕಲಕಿ ಕ್ರಾಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ರೈತ ಶ್ರೀಕಾಂತ ಬಡಿಗೇರ ಮರಹತ್ತಿ ಆತ್ಮಹತ್ಯೆಗೆ ಯತ್ನಿಸಿದರು. </p><p>ಆರು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಕೆಳಗಿಳಿದರು.</p><p>ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ ಮಾತನಾಡಿ, ಈ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗಲಿ ಎಂದು 8 ತಿಂಗಳ ಕಾಲ ನೀರಾವರಿ ಕಲ್ಪಿಸಲು 2013 ರಲ್ಲಿ ಈ ಆಭವಾದ ಕಾಮಗಾರಿ ಪೂರ್ಣವಾಗಿಲ್ಲ. ಆರು ತಿಂಗಳಲ್ಲಿ ಉಳಿದ ಕಾಮಗಾರಿ ಪೂರ್ಣಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದರು.</p><p>ಕೃಷ್ಣಾ ನದಿಯಲ್ಲಿ ನೀರು ಹರಿದು ಸಮುದ್ರ ಸೇರುತ್ತದೆ, ಪಕ್ಕದಲ್ಲಿ ನೀರು ಇಟ್ಟುಕೊಂಡು ರೈತರಿಗೆ ಅನುಕೂಲ ಇಲ್ಲದಂತಾಗಿದೆ, ಈ ಭಾಗದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.</p><p> ಕಾಮಗಾರಿಗೆ ರೈತರು ತಕರಾರು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಮನೆಗೂ ನೀರು, ವಿದ್ಯುತ್ ಇನ್ನೊಬ್ಬ ರೈತರ ಹೊಲದಲ್ಲಿ ಹಾದು ಬರುತ್ತದೆ ಎಂಬುದನ್ನು ರೈತರು ತಿಳಿದುಕೊಳ್ಳಬೇಕು ಎಂದರು.</p><p>ರೈತ ಮುಖಂಡ ಜೋತಿಬಾ ಚಹ್ವಾಣ ಮಾತನಾಡಿ, ರೈತರ ಬದುಕು ಹಾಳಾಗುತ್ತಿದೆ. ಈ ಮೊದಲು ಮಾಡಿರುವ ಕಾಮಗಾರಿಯೂ ಹಾಳಾಗುತ್ತಿದೆ. ಯೋಜನೆ ಪೂರ್ಣ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.</p><p>ರೈತ ಸಿದ್ಧರಾಯ ಸನಸಿದ್ದ, ರಾಮಪ್ಪ ಕರ್ಜಗಿ, ಗೂಡುಸಾಬ ಹೊನವಾಡ, ಸಾದೇವ ಕದಂ, ನಿಂಗಪ್ಪ ಸನಸಿದ್ಧ, ಅಪ್ಪಶಿ ಗೋರಗಾಂವಕರ, ಶ್ರೀಶೈಲ ಸಾಯಗೊಂಡ,ಸದಾಶಿವ ಪಾಟೀಲ, ಪರಸು ಜಮಖಂಡಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ:</strong> 12 ವರ್ಷಗಳಿಂದ ನಡೆಯುತ್ತಿರುವ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ(ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆ) ಕಾಮಗಾರಿ ಪೂರ್ಣಗೊಳಿಸುವಿದು ವಿಳಂಬವಾಗುತ್ತಿದೆ ಎಂದು ಚಿಕ್ಕಲಕಿ ಕ್ರಾಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ರೈತ ಶ್ರೀಕಾಂತ ಬಡಿಗೇರ ಮರಹತ್ತಿ ಆತ್ಮಹತ್ಯೆಗೆ ಯತ್ನಿಸಿದರು. </p><p>ಆರು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಕೆಳಗಿಳಿದರು.</p><p>ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ ಮಾತನಾಡಿ, ಈ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗಲಿ ಎಂದು 8 ತಿಂಗಳ ಕಾಲ ನೀರಾವರಿ ಕಲ್ಪಿಸಲು 2013 ರಲ್ಲಿ ಈ ಆಭವಾದ ಕಾಮಗಾರಿ ಪೂರ್ಣವಾಗಿಲ್ಲ. ಆರು ತಿಂಗಳಲ್ಲಿ ಉಳಿದ ಕಾಮಗಾರಿ ಪೂರ್ಣಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದರು.</p><p>ಕೃಷ್ಣಾ ನದಿಯಲ್ಲಿ ನೀರು ಹರಿದು ಸಮುದ್ರ ಸೇರುತ್ತದೆ, ಪಕ್ಕದಲ್ಲಿ ನೀರು ಇಟ್ಟುಕೊಂಡು ರೈತರಿಗೆ ಅನುಕೂಲ ಇಲ್ಲದಂತಾಗಿದೆ, ಈ ಭಾಗದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.</p><p> ಕಾಮಗಾರಿಗೆ ರೈತರು ತಕರಾರು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಮನೆಗೂ ನೀರು, ವಿದ್ಯುತ್ ಇನ್ನೊಬ್ಬ ರೈತರ ಹೊಲದಲ್ಲಿ ಹಾದು ಬರುತ್ತದೆ ಎಂಬುದನ್ನು ರೈತರು ತಿಳಿದುಕೊಳ್ಳಬೇಕು ಎಂದರು.</p><p>ರೈತ ಮುಖಂಡ ಜೋತಿಬಾ ಚಹ್ವಾಣ ಮಾತನಾಡಿ, ರೈತರ ಬದುಕು ಹಾಳಾಗುತ್ತಿದೆ. ಈ ಮೊದಲು ಮಾಡಿರುವ ಕಾಮಗಾರಿಯೂ ಹಾಳಾಗುತ್ತಿದೆ. ಯೋಜನೆ ಪೂರ್ಣ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.</p><p>ರೈತ ಸಿದ್ಧರಾಯ ಸನಸಿದ್ದ, ರಾಮಪ್ಪ ಕರ್ಜಗಿ, ಗೂಡುಸಾಬ ಹೊನವಾಡ, ಸಾದೇವ ಕದಂ, ನಿಂಗಪ್ಪ ಸನಸಿದ್ಧ, ಅಪ್ಪಶಿ ಗೋರಗಾಂವಕರ, ಶ್ರೀಶೈಲ ಸಾಯಗೊಂಡ,ಸದಾಶಿವ ಪಾಟೀಲ, ಪರಸು ಜಮಖಂಡಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>