ನಗರದಲ್ಲಿ ಮಧ್ಯಾಹ್ನ 12 ಗಂಟೆ ವರೆಗೆ ಬಂದ್ಗೆ ಬೆಂಬಲ ವ್ಯಕ್ತವಾಯಿತು. ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ವಾಹನ ಸಂಚಾರ ವಿರಳವಾಗಿತ್ತು. ನಂತರ ಜನಜೀವನ, ವಾಹನ ಸಂಚಾರ ಸಹಜ ಸ್ಥಿತಿಗೆ ಬಂದಿತು. ಪ್ರತಿಭಟನೆಯಲ್ಲಿ ಮಹಾಂತೇಶ ವಂಕಲಕುಂಟಿ, ಅಶೋಕ ಪೂಜಾರಿ, ಮುರ್ತುಜಾ ಬಾದಾಮಿ, ಮಹಮ್ಮದ ಕರಡಿ ಇದ್ದರು.