ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳೊಂದಿಗೆ ಅಪ್ಪನೂ ನೀರುಪಾಲು

ಬೈಕ್‌ನಿಂದ ಜಾರಿ ಕೃಷ್ಣಾ ನದಿಗೆ ಬಿದ್ದ ಮೂರು ವರ್ಷದ ಮಗು
Last Updated 4 ಜುಲೈ 2018, 14:07 IST
ಅಕ್ಷರ ಗಾತ್ರ

ಬಾಗಲಕೋಟೆ:ಚಲಿಸುತ್ತಿದ್ದ ಬೈಕ್‌ನಿಂದ ಆಯತಪ್ಪಿ ನದಿಗೆ ಬಿದ್ದ ಮಗಳನ್ನು ರಕ್ಷಿಸಲು ಹೋದ ತಂದೆ ಕೂಡ ಆಕೆಯೊಂದಿಗೆ ನೀರು ಪಾಲಾದ ಘಟನೆ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗಲಗಲಿ ಗ್ರಾಮದ ದಸ್ತಗೀರ್‌ ಗೌಂಡಿ (29) ಹಾಗೂ ಮೂರು ವರ್ಷದ ಮಗಳು ಆನಮ್‌ ಮೃತಪಟ್ಟವರು. ಸಮೀಪದ ಚಿಕ್ಕಗಲಗಲಿಯ ಶಾಲೆಯಿಂದ ಮಧ್ಯಾಹ್ನ ಮಗಳನ್ನು ವಾಪಸ್ ಕರೆ ತರುವ ವೇಳೆ ಕೃಷ್ಣಾ ನದಿ ಸೇತುವೆ ಮೇಲೆ ಈ ದುರ್ಘಟನೆ ನಡೆದಿದೆ. ಬೈಕ್ ಸೇತುವೆ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರಣ ಬೈಕ್‌ ಮೇಲೆ ಕುಳಿತಿದ್ದ ಆನಮ್‌ ಪುಟಿದು ನದಿಯಲ್ಲಿ ಬಿದ್ದಿದ್ದಾಳೆ. ಮಗಳನ್ನ ರಕ್ಷಿಸಲು ನದಿಗೆ ಹಾರಿದ ದಸ್ತಗೀರ್ ಕೂಡ ನೀರಿನಲ್ಲಿ ಮುಳುಗಿದ್ದಾರೆ.

ಮೀನುಗಾರರ ಸಹಾಯದಿಂದ ಎರಡೂ ಶವಗಳನ್ನು ಹೊರತೆಗೆಯಲಾಗಿದೆ. ಸೇತುವೆ ಮೇಲೆ ತಡೆಗೋಡೆ ಇಲ್ಲದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT