ಗಲಗಲಿ ಗ್ರಾಮದ ದಸ್ತಗೀರ್ ಗೌಂಡಿ (29) ಹಾಗೂ ಮೂರು ವರ್ಷದ ಮಗಳು ಆನಮ್ ಮೃತಪಟ್ಟವರು. ಸಮೀಪದ ಚಿಕ್ಕಗಲಗಲಿಯ ಶಾಲೆಯಿಂದ ಮಧ್ಯಾಹ್ನ ಮಗಳನ್ನು ವಾಪಸ್ ಕರೆ ತರುವ ವೇಳೆ ಕೃಷ್ಣಾ ನದಿ ಸೇತುವೆ ಮೇಲೆ ಈ ದುರ್ಘಟನೆ ನಡೆದಿದೆ. ಬೈಕ್ ಸೇತುವೆ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರಣ ಬೈಕ್ ಮೇಲೆ ಕುಳಿತಿದ್ದ ಆನಮ್ ಪುಟಿದು ನದಿಯಲ್ಲಿ ಬಿದ್ದಿದ್ದಾಳೆ. ಮಗಳನ್ನ ರಕ್ಷಿಸಲು ನದಿಗೆ ಹಾರಿದ ದಸ್ತಗೀರ್ ಕೂಡ ನೀರಿನಲ್ಲಿ ಮುಳುಗಿದ್ದಾರೆ.