<p><strong>ಮಹಾಲಿಂಗಪುರ</strong>: ‘ನಾವು ಇಷ್ಟಲಿಂಗವನ್ನು ಪೂಜೆ ಮಾಡುವಾಗ ವಿಧಿ ವಿಧಾನ, ನಿಯಮಗಳನ್ನು ಅನುಸರಿಸಬೇಕು. ಮನಸ್ಸಿಗೆ ತೋಚಿದಂತೆ ಪೂಜೆ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಗುಳೇದಗುಡ್ಡದ ಪರಮೇಶ್ವರಿ ಹೊಸಮಠ ಹೇಳಿದರು.</p>.<p>ಪಟ್ಟಣದ ಮಹಾಂತೇಶ ನಗರದಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡ ಸಿದ್ಧಾಂತ ಶಿಖಾಮಣಿ ಪಾರಾಯಣ ಹಾಗೂ ವೈದಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಏಕತ್ರ ಪೂಜೆಯಿಂದ ಸಾಧನೆ ಮಾಡಲು ಹಾಗೂ ಜೀವಾತ್ಮ ಪರಮಾತ್ಮನಾಗಲು ಸಾಧ್ಯವಿದೆ. ಇಷ್ಟಲಿಂಗವನ್ನು ಪೂಜೆ ಮಾಡುತ್ತ ಪ್ರಾಣಲಿಂಗವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಇಷ್ಟಲಿಂಗ ಧಾರಣೆಯಿಂದ ಶಿವಸ್ವರೂಪಿ ಆಗುತ್ತೇವೆ’ ಎಂದರು.</p>.<p>10 ದಿನಗಳವರೆಗೆ ಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡಿದ ಪರಮೇಶ್ವರಿ ಹೊಸಮಠ ಅವರನ್ನು ಸನ್ಮಾನಿಸಲಾಯಿತು.</p>.<p>ಗುರುಪಾದಯ್ಯ ಚಟ್ಟಿಮಠ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಚಟ್ಟಿಮಠ, ಜಯಶ್ರೀ ಮಠದ, ಬಿ.ಎಂ.ಅಯ್ಯನಗೌಡರ, ಮಹಾಲಿಂಗಯ್ಯ ಮನ್ನಯ್ಯನವರಮಠ, ವಿ.ಐ.ಪಂಚಕಟ್ಟಿಮಠ, ಎಂ.ಆರ್.ಹಿರೇಮಠ, ಹಣಮಂತ ಗೊಬ್ಬರದ, ಚನ್ನಯ್ಯ ಮಸಗುಪ್ಪಿಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ</strong>: ‘ನಾವು ಇಷ್ಟಲಿಂಗವನ್ನು ಪೂಜೆ ಮಾಡುವಾಗ ವಿಧಿ ವಿಧಾನ, ನಿಯಮಗಳನ್ನು ಅನುಸರಿಸಬೇಕು. ಮನಸ್ಸಿಗೆ ತೋಚಿದಂತೆ ಪೂಜೆ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಗುಳೇದಗುಡ್ಡದ ಪರಮೇಶ್ವರಿ ಹೊಸಮಠ ಹೇಳಿದರು.</p>.<p>ಪಟ್ಟಣದ ಮಹಾಂತೇಶ ನಗರದಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡ ಸಿದ್ಧಾಂತ ಶಿಖಾಮಣಿ ಪಾರಾಯಣ ಹಾಗೂ ವೈದಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಏಕತ್ರ ಪೂಜೆಯಿಂದ ಸಾಧನೆ ಮಾಡಲು ಹಾಗೂ ಜೀವಾತ್ಮ ಪರಮಾತ್ಮನಾಗಲು ಸಾಧ್ಯವಿದೆ. ಇಷ್ಟಲಿಂಗವನ್ನು ಪೂಜೆ ಮಾಡುತ್ತ ಪ್ರಾಣಲಿಂಗವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಇಷ್ಟಲಿಂಗ ಧಾರಣೆಯಿಂದ ಶಿವಸ್ವರೂಪಿ ಆಗುತ್ತೇವೆ’ ಎಂದರು.</p>.<p>10 ದಿನಗಳವರೆಗೆ ಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡಿದ ಪರಮೇಶ್ವರಿ ಹೊಸಮಠ ಅವರನ್ನು ಸನ್ಮಾನಿಸಲಾಯಿತು.</p>.<p>ಗುರುಪಾದಯ್ಯ ಚಟ್ಟಿಮಠ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಚಟ್ಟಿಮಠ, ಜಯಶ್ರೀ ಮಠದ, ಬಿ.ಎಂ.ಅಯ್ಯನಗೌಡರ, ಮಹಾಲಿಂಗಯ್ಯ ಮನ್ನಯ್ಯನವರಮಠ, ವಿ.ಐ.ಪಂಚಕಟ್ಟಿಮಠ, ಎಂ.ಆರ್.ಹಿರೇಮಠ, ಹಣಮಂತ ಗೊಬ್ಬರದ, ಚನ್ನಯ್ಯ ಮಸಗುಪ್ಪಿಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>